ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಬಾಳೆಹಳ್ಳಿಯ ಯುವಕ, ಕೂಲಿ ಕಾರ್ಮಿಕ ಸಂತೋಷ್ (29) ಅವರು ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮೇ 13ರಂದು ಬೆಳಗ್ಗೆ ನಡೆದಿದೆ.
ಜಾಹೀರಾತು
ನಾಲ್ವರ ಮಿತ್ರರಾದ ಸಿದ್ದೇಶ್, ಸಂತೋಷ್, ಪ್ರಸಾದ್ ದೀಪಕ್ ಬೈಕಿನಲ್ಲಿ ತೀರ್ಥಕ್ಷೇತ್ರ ಸಂದರ್ಶನಕ್ಕಾಗಿ ಬಂದಿದ್ದ ಇವರು ನೇತ್ರಾವತಿ ಸೇತುವೆ ಕೆಳಗೆ ಹೊಳೆಯ ಗುಂಡಿಯಲ್ಲಿ ಬೆಳಗ್ಗೆ 8ಗಂಟೆಗೆ ಸ್ನಾನಕ್ಕಾಗಿ ಇಳಿದಿದ್ದಾರೆ. ಈ ಸಂದರ್ಭ ಸಂತೋಷ್ ಈಜು ಬಾರದೆ ನದಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಲಾಗಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ನೇತ್ರಾವತಿಯಲ್ಲಿ ಮುಳುಗಿ ಅರಸೀಕೆರೆ ಯುವಕ ಸಾವು"