ಸ್ವಾತಂತ್ರ್ಯ ಬಂದ ಮೇಲೂ ಭಾರತೀಯ ಸಂಸ್ಕೃತಿ ಪ್ರತಿಪಾದಕರ ಕಂಡರೆ ದ್ವೇಷ ನಿಂತಿಲ್ಲ: ಡಾ. ಎಸ್.ಎಲ್. ಭೈರಪ್ಪ

www.bantwalnews.com  Report.

Editor: Harish Mambady

ಜಾಹೀರಾತು

ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಮುಸ್ಲಿಂ, ಹಿಂದುಗಳನ್ನು ಮತ್ತು ಹಿಂದುಗಳಲ್ಲಿ ಜಾತಿ ತಾರತಮ್ಯ ಮಾಡಿದರು. ಸ್ವಾತಂತ್ರ್ಯಾನಂತರವೂ ಅದನ್ನೇ ಮುಂದುವರಿಸಲಾಯಿತು. ರಾಷ್ಟ್ರೀಯತೆಯನ್ನು, ಭಾರತೀಯ ಸಂಸ್ಕೃತಿಯನ್ನು ಅದರ ಮೌಲ್ಯಗಳನ್ನು ಪ್ರತಿಪಾದಿಸುವವರನ್ನು ಕಂಡರೆ ದ್ವೇಷ. ಅದಕ್ಕಾಗಿಯೇ ಕಲ್ಲಡ್ಕದಲ್ಲಿ ಬಿಸಿಯೂಟ ಕೊಡುಗೆ ನಿಲ್ಲಿಸಿದರು ಎಂದು ಹಿರಿಯ ಲೇಖಕ, ಸರಸ್ವತಿ ಸಮ್ಮಾನ್ ಪುರಸ್ಕೃತ, ಪದ್ಮಶ್ರೀ ಡಾ. ಎಸ್.ಎಲ್. ಭೈರಪ್ಪ ಹೇಳಿದರು.

ಶನಿವಾರ ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ ಡಾ. ಭೈರಪ್ಪ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರೊಂದಿಗೆ ವಿದ್ಯಾಸಂಸ್ಥೆ ಕುರಿತು ಮಾಹಿತಿ ಪಡೆದುಕೊಂಡರು. ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಭೈರಪ್ಪ ಬಾಷಣದ ಮುಖ್ಯಾಂಶಗಳು ಇವು.

ಜಾಹೀರಾತು

  • ಅಂದು ಬ್ರಿಟಿಷರು ಒಡೆದು ಆಳಿದರೆ, ಬಳಿಕದ ಸರಕಾರ ಅದನ್ನು ಮುಂದುವರಿಸಿತು.
  • ಹೆಣ್ಣಿಗೆ ಗರಿಷ್ಠ ಗೌರವ, ಸ್ಥಾನಮಾನ ನೀಡಿದ್ದು ಹಿಂದು ಸಂಸ್ಕೃತಿ. ಪ್ರಪಂಚಕ್ಕೆ ಜನ್ಮನೀಡಿದ್ದು, ದೈತ್ಯಸಂಹಾರದ ನೇತೃತ್ವ ವಹಿಸಿದ್ದು, ದೇವತೆ.
  •  ವಂದೇ ಮಾತರಂ ಹಾಡು ಸ್ವಾತಂತ್ರ ಬರುವವರಗೆ ನಮ್ಮ ರಾಷ್ಟ್ರಗೀತೆಯಾಯಿತು.
  • ಗಾಂಧೀಜಿಯ ಅಹಿಂಸೆಯಿಂದಷ್ಟೇ ಸ್ವಾತಂತ್ರ್ಯ ಬಂತು ಎನ್ನುವ ಕತೆ ಸೃಷ್ಟಿಸಲಾಗಿದೆ. ಆದರೆ ಬ್ರಿಟಿಷರು ಕೇವಲ ಅಹಿಂಸೆಯಿಂದಾಗಿ ಭಾರತವನ್ನು ಬಿಟ್ಟು ಹೋಗಿಲ್ಲ ಮುಂಬೈನ ನೌಕಾಪಡೆಯ ದಂಗೆಗೆ ಹೆದರಿ ಓಡಿದ್ದಾರೆ
  • ವಂಶ ಪಾರಂಪರ್ಯದ ರಾಜಕಾರಣವೇ ಈಗ ಮುಂದುವರಿದಿದೆ
  • ನೈತಿಕ ಭಯ ನಮ್ಮೊಳಗಿರ ಬೇಕು ಪಠ್ಯೇತರ ಚಟುವಟಿಕೆಗಳ ಮೂಲಕ ನೀತಿ ಬೆಳೆಸಬೇಕು.

ಜಾಹೀರಾತು

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ  ಡಾ. ಪ್ರಭಾಕರ ಭಟ್ ಸ್ವಾಗತಿಸಿದರು. ಶಾಲಾ ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್, ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ವೇದಿಕೆಯಲ್ಲಿದ್ದರು.  ಉಪನ್ಯಾಸಕ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ ನಿರೂಪಿಸಿ ವಂದಿಸಿದರು.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಸ್ವಾತಂತ್ರ್ಯ ಬಂದ ಮೇಲೂ ಭಾರತೀಯ ಸಂಸ್ಕೃತಿ ಪ್ರತಿಪಾದಕರ ಕಂಡರೆ ದ್ವೇಷ ನಿಂತಿಲ್ಲ: ಡಾ. ಎಸ್.ಎಲ್. ಭೈರಪ್ಪ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*