ಬಂಟ್ವಾಳ ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ನಡೆದ ಜೇಸೀ ಜೋಡುಮಾರ್ಗ ನೇತ್ರಾವತಿಯ ಸಪ್ತ ಲಹರಿ ಜೇಸೀ ಸಪ್ತಾಹ – 2018 ಸಂದರ್ಭ, ಮುಖ್ಯ ಅತಿಥಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಅವರು, ಬಂಟ್ವಾಳ ವನ್ನು ಅಭಿವೃದ್ಧಿ ಪಡಿಸಲು ಜೇಸೀ ಸಂಸ್ಥೆಯು ಸಲಹೆ ನೀಡಬೇಕು, ಬಂಟ್ವಾಳ ನಗರದ ಕೇಂದ್ರ ಸ್ಥಾನ ಬಿ ಸಿ ರೋಡಿನ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಜೇಸೀ ಐ ಜೋಡುಮಾರ್ಗ ನೇತ್ರಾವತಿ ಯ ಅಧ್ಯಕ್ಷರಾದ ಸವಿತಾ ನಿರ್ಮಲ್, ಪೂರ್ವಾಧ್ಯಕ್ಷರಾದ ಬಿ ರಾಮಚಂದ್ರ ರಾವ್, ಪಿ ಎ ರಹೀಂ, ಅಹಮ್ಮದ್ ಮುಸ್ತಾಫ, ನವೀನ್ ಚಂದ್ರ ಶೆಟ್ಟಿ ಮುಂಡಾಜೆ, ಜಯಾನಂದ ಪೆರಾಜೆ, ಉಮೇಶ್ ನಿರ್ಮಲ್, ಕೃಷ್ಣ ರಾಜ್ ಭಟ್, ಸತ್ಯನಾರಾಯಣ ರಾವ್, ಡಾ ರಾಘವೇಂದ್ರ ಹೊಳ್ಳ, ಪದಾಧಿಕಾರಿಗಳಾದ ಸುರೇಶ್ ಭಂಡಾರಿ, ಜೊತೀಂದ್ರ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಹರ್ಷರಾಜ್ ಸಿ, ಜೇಸಿರೆಟ್ ವಿಭಾಗದ ಅಧ್ಯಕ್ಷೆ ಗಾಯತ್ರಿ ಲೋಕೇಶ್, ಕಾರ್ಯಕ್ರಮ ನಿರ್ದೇಶಕರಾದ ರವೀಂದ್ರ ಕುಕ್ಕಾಜೆ, ಧೀರಜ್ ಹೆಬ್ರಿ ಇದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ಅಭಿವೃದ್ಧಿಗೆ ಜೇಸಿ ಸಹಕಾರ ಅಗತ್ಯ: ರಾಜೇಶ್ ನಾಯ್ಕ್"