ಇಳಿದ ನೆರೆ, ಮಳೆ ಕಡಿಮೆ, ಜನರು ನಿರಾಳ

ಭಾನುವಾರ ಬೆಳಗ್ಗೆ ನೇತ್ರಾವತಿ ನೀರಿನ ಮಟ್ಟ 7.6 ಮೀಟರ್ ಎತ್ತರದಲ್ಲಿದ್ದರೂ ಕಳೆದ ವಾರ ಇದ್ದಂಥ ಆತಂಕ ಬಂಟ್ವಾಳದಲ್ಲಿ ಕಡಿಮೆಯಾಗಿದೆ. ಶನಿವಾರ ದಿನವಿಡೀ ಬಿಸಿಲು ಕಾಣಿಸಿಕೊಂಡು, ರಾತ್ರಿ ಮಳೆ ಸುರಿದರೆ, ಭಾನುವಾರ ಬೆಳಗ್ಗೆ ಸಣ್ಣದಾಗಿ ಮಳೆಯಾಗುತ್ತಿದೆ. ಒಟ್ಟಾರೆಯಾಗಿ ನೇತ್ರಾವತಿಯಲ್ಲಿ ಪ್ರವಾಹದ ಅಬ್ಬರ ಕಡಿಮೆಯಾಗಿದೆ. ಜನಜೀವನ ಸಂಪೂರ್ಣ ಸಹಜ ಸ್ಥಿತಿಗೆ ಬಂದಿದೆ.

ಜಾಹೀರಾತು

ಶನಿವಾರ ಸಂಜೆಯ ವೇಳೆಗೆ ನೇತ್ರಾವತಿ ನದಿಯ ಪಾತ್ರದೊಳಗೆ ನೀರು ಹರಿಯುತ್ತಿದ್ದು, ನೀರಿನ ಮಟ್ಟ 6.8 ಮೀ.ಎತ್ತರದಲ್ಲಿತ್ತು. ನೆರೆಯಿಂದ ಜಲಾವೃತಗೊಂಡಿದ್ದ ನದಿತೀರದ ತಗ್ಗು ಪ್ರದೇಶಗಳಾದ ಪಾಣೆಮಂಗಳೂರಿನ ಗೂಡಿನಬಳಿ, ಆಲಡ್ಕ, ಬಂಟ್ವಾಳದ ಜಕ್ರಿಬೆಟ್ಟು, ಬಡ್ಡಕಟ್ಟೆ, ಬಸ್ತಿಪಡ್ಪು, ಕಂಚಿಕಾರಪೇಟೆ,  ನಾವೂರು, ಬ್ರಹ್ಮರಕೊಟ್ಲು, ತಲಪಾಡಿ ಮೊದಲಾದೆಡೆಯಲ್ಲಿ ನೀರು ಪೂರ್ಣಪ್ರಮಾಣದಲ್ಲಿ ಇಳಿಮುಖವಾಗಿದೆ.

 

ನೀರಿನಿಂದ ಮುಳುಗಡೆಯಾದ ಹಿನ್ನಲೆಯಲ್ಲಿ ಗಂಜಿಕೇಂದ್ರ, ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದ ನಿರಾಶ್ರಿತರು ಶನಿವಾರ ಮರಳಿ ಸ್ವಸ್ಥಾನಕ್ಕೆ ತೆರಳಿದ್ದಾರೆ.

ಜಾಹೀರಾತು

ಕಳೆದ ಒಂದು ವಾರದಿಂದ ನೆರೆ ಪರಿಹಾರಕಾರ್ಯದಲ್ಲಿ ನಿರತರಾಗಿದ್ದ ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಕಂದಾಯಾಧಿಕಾರಿಗಳ ತಂಡ ಹಾಗೂ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಮತ್ತವರ ಸಿಬ್ಬಂದಿಯ ತಂಡ ಸದ್ಯ ನಿಟ್ಟುಸಿರು ಬಿಟ್ಟಿದೆ.

ವಾರದ ಸುದೀರ್ಘ ರಜೆಯ ಬಳಿಕ ಶನಿವಾರ ಶಾಲೆಗಳು ಆರಂಭಗೊಂಡವು. ನಿರಾಶ್ರಿತರಿಗೆ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರಿನ ಶಾರದಾ ಹೈಸ್ಕೂಲ್,ಬಂಟ್ವಾಳ ಪ್ರವಾಸಿಮಂದಿರ ಹಾಗೂ ಬಿ.ಮೂಡಗ್ರಾಮದ ನಂದರಬೆಟ್ಟುವಿನಲ್ಲಿ ಗಂಜಿಕೇಂದ್ರವನ್ನು ತೆರೆಯಲಾಗಿತ್ತು.

ಜಾಹೀರಾತು

ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಅವರ ನೇತೃತ್ವದ ಸಿಬಂದಿಗಳ ತಂಡ ಈ ಗಂಜಿಕೇಂದ್ರದ ಸಂಪೂರ್ಣ ಹೊಣೆ ಹೊತ್ತು ನಿರಾಶ್ರಿತರಿಗೆ ಸಕಲ ವ್ಯವಸ್ಥೆ ಮಾಡಿತ್ತು.

ಪ್ರವಾಹದ ಸಂದರ್ಭದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ‌ಮತ್ತು ಕಂದಾಯಾಧಿಕಾರಿಗಳನೊಳಗೊಂಡ ತಂಡದ ಹಾಗೂ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಮತ್ತವರ ಸಿಬಂದಿಗಳ ತಂಡ ಕೈಗೊಂಡ ತುರ್ತು ಕಾರ್ಯ ಸಾರ್ವತ್ರಿಕ ಶ್ಲಾಘನೆಗೊಳಗಾಗಿದೆ.

ಬಂಟ್ವಾಳದಾದ್ಯಂತ ಬಂದಿರುವ ಪ್ರವಾಹದಿಂದ ಯಾವುದೇ ಸಾವು,ನೋವುಗಳ ಸಂಭವಿಸಲಿಲ್ಲ.ಆದರೆ ಗಾಳಿ,ಮಳೆಗೆ ಕೆಲ ಮನೆಗಳಿಗೆ ಹಾನಿಯಾಗಿರುವುದು ವರದಿಯಾಗಿದೆ.

ಜಾಹೀರಾತು

ಬಂಟ್ವಾಳದಲ್ಲಿ ಬಿಸಿಲು: ಸಚಿವ, ಶಾಸಕ, ಜಿಲ್ಲಾಧಿಕಾರಿ, ನ್ಯಾಯಾಧೀಶರಿಂದ ಪರಿಸ್ಥಿತಿ ಅವಲೋಕನ

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಇಳಿದ ನೆರೆ, ಮಳೆ ಕಡಿಮೆ, ಜನರು ನಿರಾಳ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*