ದೇವಾಡಿಗ ಸಮಾಜದಿಂದ ಶ್ರೀಪೊಳಲಿ ಷಷ್ಠಿರಥ ಸಮರ್ಪಣೆ: 13ರಂದು ಮುಹೂರ್ತ

ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಠಿರಥ ಸಮರ್ಪಣಾ ಸಮಿತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವರಿಗೆ ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ಷಷ್ಠಿರಥ ಸಮರ್ಪಣೆ ಮುಂದಿನ ವರ್ಷ ಜಾತ್ರೆ ಸಂದರ್ಭ ನಡೆಯಲಿದ್ದು, ಇದರ ಹಿನ್ನೆಲೆಯಲ್ಲಿ ಸೆ.13ರಂದು ಮುಹೂರ್ತ ಕಾರ್ಯಕ್ರಮ ಶ್ರೀ ಕ್ಷೇತ್ರ ಪೊಳಲಿಯಲ್ಲಿ ನಡೆಯಲಿದೆ.

www.bantwalnews.com Editor: Harish Mambady

ಜಾಹೀರಾತು

 

ಸಮಿತಿಯ ಅಧ್ಯಕ್ಷ ರಾಮ್ ದಾಸ್ ಬಂಟ್ವಾಳ ಮಂಗಳವಾರ ಸಂಜೆ ಬಂಟ್ವಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಸುಮಾರು 1 ಸಾವಿರದಷ್ಟು ದೇವಾಡಿಗ ಬಂಧುಗಳು ನಾನಾ ಭಾಗಗಳಲ್ಲಿದ್ದು, ಇತರ ಸಮಾಜದವರ ಸಹಾಯ, ಸಹಕಾರದಿಂದ ದೇವರ ಷಷ್ಠಿರಥಕ್ಕೆ ಬೇಕಾಗುವ ಸಾಗುವಾನಿ, ಬೋಗಿ, ಹೆಬ್ಬಲಸು, ಸಂಪಿಗೆ ಮರಗಳ ಸಂಗ್ರಹ ಕಾರ್ಯ ನಡೆಸುತ್ತಿದೆ. ಯೋಜನೆಗೆ ಅಂದಾಜು 40 ಲಕ್ಷ ರೂ ವೆಚ್ಚ ತಗಲುವ ನಿರೀಕ್ಷೆ ಇದ್ದು, 15 ಲಕ್ಷ ರೂಗಳಷ್ಟು ದೇಣಿಗೆ ಸಂಗ್ರಹವಾಗಬೇಕಿದೆ. ಊರ, ಪರವೂರ ದೇವಾಡಿಗ ಸಮಾಜದ ಪ್ರಮುಖರನ್ನು ಒಗ್ಗೂಡಿಸಿ ಸಮಿತಿ ರಚಿಸಲಾಗಿದ್ದು, ಮೇ 19ರಂದು ಬೃಹತ್ ಸಮಾಲೋಚನಾ ಸಭೆ ದೇವಳ ವಠಾರದಲ್ಲಿ ನಡೆದಿತ್ತು. ಇದೀಗ ಸೆ.13ರಂದು ಶುಕ್ರಬಾರ ಬೆಳಗ್ಗೆ 10ಕ್ಕೆ ಶ್ರೀ ಪೊಳಲಿ ದೇವಳದ ವಠಾರದಲ್ಲಿ ರಥದ ಮರದ ಕೆತ್ತನೆ ಕೆಲಸಗಳ ವಿಧ್ಯುಕ್ತ ಮುಹೂರ್ತವನ್ನು ತಂತ್ರಿಗಳು, ಅರ್ಚಕರು ಮತ್ತು ಆಡಳಿತ ಮಂಡಳಿ ಅನುಮತಿ ಮತ್ತು ಉಪಸ್ಥಿತಿಯೊಂದಿಗೆ ನಡೆಯಲಿದೆ. ಈ ಸಂದರ್ಭ ಸಮಾಜದ ಬಂಧುಗಳು, ಇತರ ಸಮಾಜದ ದಾನಿಗಳು ಭಾಗವಹಿಸುವರು ಎಂದು ರಾಮ್ ದಾಸ್ ಬಂಟ್ವಾಳ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಾವತಿ ದೇವಾಡಿಗ, ಪ್ರವೀಣ್ ತುಂಬೆ, ದಾಮೋದರ ದೇವಾಡಿಗ, ಸದಾಶಿವ ದೇವಾಡಿಗ, ಪ್ರಕಾಶ್ ದೇವಾಡಿಗ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ದೇವಾಡಿಗ ಸಮಾಜದಿಂದ ಶ್ರೀಪೊಳಲಿ ಷಷ್ಠಿರಥ ಸಮರ್ಪಣೆ: 13ರಂದು ಮುಹೂರ್ತ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*