ಹಿಂದು ಧಾರ್ಮಿಕ ಸೇವಾ ಸಮಿತಿ ವತಿಯಿಂದ ಬಿ.ಸಿ.ರೋಡಿನಲ್ಲಿ ಪೂಜಿಸಲಾದ ಗಣಪತಿಗೆ ಕೈಕಂಬದ ಶ್ರೀರಾಮ ಗೆಳೆಯರ ಬಳಗ ವತಿಯಿಂದ ಸುಮಾರು ಮೂರೂವರೆ ಸಾವಿರ ಅರಳಿನ ಉಂಡೆಗಳ ಹಾರವನ್ನು ಅರ್ಪಿಸಲಾಯಿತು.
ಜಾಹೀರಾತು
ಬಿ.ಸಿ.ರೋಡಿನಿಂದ ಕೈಕಂಬ ಪೊಳಲಿ ದ್ವಾರದವರೆಗೆ ಮೆರವಣಿಗೆಸಾಗಿದ ಸಂದರ್ಭ ಗೆಳೆಯರ ಬಳಗದ ಅಧ್ಯಕ್ಷ ಸದಾಶಿವ ಕೈಕಂಬ ನೇತೃತ್ವದಲ್ಲಿ ಭಕ್ತರು ಬೃಹತ್ ಹಾರವನ್ನು ಅರ್ಪಿಸಿದರು. ಸುಮಾರು 10 ಅಡಿ ಉದ್ದದ ಈ ಮಾಲೆ ಜನಾಕರ್ಷಣೆಗೆ ಒಳಗಾಯಿತು. ಉಪಾಧ್ಯಕ್ಷ ಶೈಲೇಶ್ ಕೈಕಂಬ, ಜಗದೀಶ್ ಕಾರ್ಯದರ್ಶಿ, ಗೌರವ ಸಲಹೆಗಾರ ರಮೇಶ್, ಮಚ್ಚೆಂದ್ರ ಸಾಲಿಯಾನ್ ಗುರುಕೃಪ ಹಾಗೂ ಸಂಘದ ಸದಸ್ಯರು ಇದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಗಣಪತಿಗೆ ಅರಳಿನ ಬೃಹತ್ ಹಾರ"