ಶ್ರೀಕ್ಷೇತ್ರ ಗೋಕರ್ಣದಲ್ಲಿ ನಿತ್ಯ, ನಿರಂತರ ಕಲಾಸೇವೆ: ರಾಘವೇಶ್ವರ ಶ್ರೀಗಳು

ಹೊನ್ನಾವರ: ಶ್ರೀಕ್ಷೇತ್ರ ಗೋಕರ್ಣದ ಸರ್ವಾಂಗೀಣ ಅಭಿವೃದ್ಧಿ ಪರ್ವದಲ್ಲಿ ಹೊಸ ಶಖೆಯೊಂದು ಆರಂಭವಾಗುತ್ತಿದ್ದು, ನಾಡಿನ ಕಲಾವಿದರು ಶ್ರೀ ಮಹಾಬಲೇಶ್ವರನಿಗೆ ನಿರಂತರ ಕಲಾಸೇವೆ ಸಮರ್ಪಿಸಲು ಅನುವಾಗುವಂತೆ ದೇವಾಲಯ ಆವರಣದಲ್ಲಿ “ಶಿವಪದ” ವೇದಿಕೆ ಈ ತಿಂಗಳ 8ರಂದು ಲೋಕಾರ್ಪಣೆಯಾಗುತ್ತಿದೆ.

ಜಾಹೀರಾತು

ಜಗತ್ತಿನ ಏಕೈಕ ಎನಿಸಿದ ಆತ್ಮಲಿಂಗವನ್ನು ಸ್ವತಃ ಸ್ಪರ್ಶಿಸಿ ಪೂಜಿಸಲು ಭಕ್ತರಿಗೆ ಅವಕಾಶ ಇರುವಂತೆ, ಶ್ರೀ ಸನ್ನಿಧಿಯಲ್ಲಿ ಕಲಾವಿದರು ಅನುದಿನವೂ, ಅನುಕ್ಷಣವೂ ನಾದ- ನಾಟ್ಯದ ಮೂಲಕ ಶ್ರೀಮಹಾಬಲೇಶ್ವರನನ್ನು ಆರಾಧಿಸಲು ಇದು ವೇದಿಕೆಯಾಗಲಿದೆ ಎಂದು  ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೋಕರ್ಣ ಮಹಾಬಲೇಶ್ವರ ಸೇವಾ ಸಂತುಷ್ಟ, .ಶ್ರದ್ಧಾಸಂತುಷ್ಟ. ಕೋಟಿ ಹೊನ್ನು ಕಂಡು ಹರಸುವ ಹರನಲ್ಲ; ಬದಲಾಗಿ ಒಂದು ಗಾನಕ್ಕೆ, ಒಂದು ನಾಟ್ಯಕ್ಕೆ ಸುಪ್ರೀತನಾಗಿ ಒಲಿಯುವ ಓಂಕಾರೇಶ್ವರ ಎಂಬ ಪ್ರತೀತಿ. ಈ ಕಾರಣದಿಂದಲೇ ನಾಡಿನ ಕಲಾವಿದರಿಗೆ ನಿತ್ಯ ನಿರಂತರ ಕಲೋಪಾಸನೆಗೆ ಅವಕಾಶ ಕಲ್ಪಿಸುವ ಸಂಕಲ್ಪದಿಂದ ವೇದಿಕೆ ಸಜ್ಜಾಗಿದೆ.

8ರಂದು ಸಂಜೆ 5ಕ್ಕೆ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳು ಈ ಕಲಾವೇದಿಕೆ ಲೋಕಾರ್ಪಣೆ ಮಾಡುವರು. ಇದಕ್ಕೂ ಮುನ್ನ ವೇದಘೋಷದೊಂದಿಗೆ ಭವ್ಯ ಮೆರವಣಿಗೆಲ್ಲಿ ನಟರಾಜನನ್ನು ವೇದಿಕೆಗೆ ಕರೆ ತರಲಾಗುತ್ತದೆ. ಕಲಾವಿದರಿಗೆ ಅನುದಿನವೂ ಮುಕ್ತವಾಗಿರುವ ವೇದಿಕೆಯ ಲೋಕಾರ್ಪಣೆ ಸಂದರ್ಭದಲ್ಲಿ ಧಾರವಾಡದ ಪಂಡಿತ ವೆಂಕಟೇಶ ಕುಮಾರ್ ಸಂಗೀತ ರಸಧಾರೆ ಹರಿಸುವರು. ತಬಲಾದಲ್ಲಿ ಕೇಶವ ಜೋಶಿ ಸಹಕರಿಸುವರು.

ಜಾಹೀರಾತು

ಅಭಿವೃದ್ಧಿ ಪಥ

ಶ್ರೀಕ್ಷೇತ್ರ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟ ಬಳಿಕ ಕಳೆದೊಂದು ದಶಕದಲ್ಲಿ ಅಪಾರ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಶ್ರೀಕ್ಷೇತ್ರದಲ್ಲಿ ಪುರಾಣಕಾಲದ ಗತವೈಭವ ಮರುಕಳಿಸಿದೆ. ಜಗದೀಶ್ವರನ ಸುಪ್ರಸನ್ನತೆ, ಭಕ್ತರ ಮನಃಸಂತೋಷ ಹಾಗೂ ಆಶ್ರಿತರಿಗೆ ಹಿತ ಎಂಬ ಮೂರು ಧ್ಯೇಯಗಳನ್ನು ಕೇಂದ್ರೀಕರಿಸಿ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ನಡೆಯುತ್ತಿವೆ.

ಧಾರ್ಮಿಕ, ಸಾಮಾಜಿಕ, ದೇಗುಲ ಪರಿಸರ ಹೀಗೆ ವಿಭಿನ್ನ ಆಯಾಮಗಳಲ್ಲಿ ಗಣನೀಯ ಸುಧಾರಣೆಗಳು ಆಗಿವೆ. ಧಾರ್ಮಿಕವಾಗಿ ಗೋಕರ್ಣ ಗೌರವ ಎಂಬ ವಿಶೇಷ ಕಾರ್ಯಕ್ರಮದಡಿ ದೇಶದ ಮೂಲೆ ಮೂಲೆಗಳಿಂದ ಯತಿಗಳನ್ನು ಆಮಂತ್ರಿಸಿ ದಿನಕ್ಕೊಬ್ಬರು ಯತಿಗಳಿಂದ ವಿಶೇಷ ಪೂಜೆಗಳು ನಿರಂತರ 600 ದಿನ ನಡೆದಿದ್ದು ವಿಶೇಷ.

ಜಾಹೀರಾತು

ಸಮಸ್ತ ಭಕ್ತಕೋಟಿಯ ಈ ಅಪೂರ್ವ ಶ್ರದ್ಧಾ-ಭಕ್ತಿಯ ಕೇಂದ್ರದಲ್ಲಿ ಕೈಯಲ್ಲಿ ಚಿಕ್ಕಾಸು ಇಲ್ಲದವರು ಕೂಡಾ ಧರ್ಮದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡಾ ಗರ್ಭಗುಡಿಯಲ್ಲಿ ಆತ್ಮಲಿಂಗವನ್ನು ಸ್ಪರ್ಶಿಸಿ ಧನ್ಯತಾ ಭಾವದಿಂದ ಮನಃಶಾಂತಿ ಪಡೆಯುವಂತಾಗಬೇಕು ಎಂಬ ಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳ ಆಶಯ ಸಾಕಾರಗೊಂಡಿದೆ.

ಸೈನಿಕರನ್ನು, ನಿವೃತ್ತ ಯೋಧರಿಗೆ ವಿಶೇಷ ಗೌರವ ಸಲ್ಲಿಸುವ ಮೇಲ್ಪಂಕ್ತಿಯನ್ನು ಶ್ರೀಕ್ಷೇತ್ರ ಹಾಕಿಕೊಟ್ಟಿದ್ದು, ದೇಶಕಾಯುವ ಕಾಯಕಯೋಗಿಗಳಿಗೆ ನೇರವಾಗಿ ದರ್ಶನ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ದೇಶದ ವಿವಿಧೆಡೆಗಳಿಂದ ಪ್ರತಿದಿನ ಆಗಮಿಸುವ ಗಣ್ಯಮಾನ್ಯರು, ನ್ಯಾಯಮೂರ್ತಿಗಳು, ಭಕ್ತರಿಗೆ ಕಲ್ಪಿಸಿರುವ ಸೌಲಭ್ಯದ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಸಂದರ್ಶಕರ ಅಭಿಪ್ರಾಯದಲ್ಲಿ ದಾಖಲಿಸಿರುವುದು, ಇಲ್ಲಿನ ಅಚ್ಚುಗಟ್ಟುತನಕ್ಕೆ ದೊರಕಿರುವ ಐಎಸ್‍ಓ ಮಾನ್ಯತೆಗಿಂತಲೂ ದೊಡ್ಡ ಪ್ರಮಾಣಪತ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.

ಆದಿಗೋಕರ್ಣ ಸಂರಕ್ಷಣಾ ಪುನರ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ನಂದಿಮಂಟಪದಲ್ಲಿ ವಿಸ್ತಾರ ರಜತದ್ವಾರದ ಮೊದಲ ಹಂತದ ಕಾಮಗಾರಿ 70 ಲಕ್ಷ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ಅಂತೆಯೇ ಗರ್ಭಗುಡಿಗೆ ಕೂಡಾ ಅಷ್ಟೇ ವೆಚ್ಚದಲ್ಲಿ ರಜತ ದ್ವಾರ ನಿರ್ಮಿಸಲಾಗಿದೆ.

ಜಾಹೀರಾತು

ಅತ್ಯಾಧುನಿಕ ಬಾಯ್ಲರ್ ವ್ಯವಸ್ಥೆ ಕಲ್ಪಿಸಿ, ಶುಚಿ ರುಚಿಯಾದ ಅಮೃತಾನ್ನ ಪ್ರಸಾದ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು, 40 ಲಕ್ಷಕ್ಕೂ ಹೆಚ್ಚು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದ್ದಾರೆ. ಮಧ್ಯಾಹ್ನ ಹಾಗೂ ರಾತ್ರಿ ಹೀಗೆ ಎರಡು ಹೊತ್ತು ಉಚಿತ ಪ್ರಸಾದ ಭೋಜನ ಇರುವ ಜಿಲ್ಲೆಯ ಪ್ರಥಮ ದೇಗುಲ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಸಾಮಾಜಿಕವಾಗಿಯೂ ಹತ್ತುಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ 75 ಲಕ್ಷಕ್ಕೂ ಅಧಿಕ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸುತ್ತಿರುವ ಗ್ರಾಮಗಳ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿ ಜೀವಜಲ ಉಚಿತ ವಿತರಣಾ ಸೇವೆ ಒದಗಿಸಲಾಗುತ್ತಿದೆ. ಸ್ಥಳೀಯ ಅನಾರೋಗ್ಯಪೀಡಿತರಿಗೆ ವೈದ್ಯಕೀಯ ನೆರವು, ಆರ್ಥಿಕವಾಗಿ ಹಿಂದುಳಿದ ವಧೂವರರಿಗೆ ಉಚಿತ ವಿವಾಹ ವ್ಯವಸ್ಥೆ ಶ್ರೀಕ್ಷೇತ್ರದ ಮಾನವೀಯ ಕಾರ್ಯಗಳಿಗೆ ಕೆಲ ನಿದರ್ಶನ ಎಂದು ಹೇಳಿದರು.

ಗೋಕರ್ಣ ದೇವಾಲಯದ ಪದನಿಮಿತ್ತ ಆಡಳಿತಾಧಿಕಾರಿ ಜಿ.ಕೆ.ಹೆಗಡೆ, ಶಿವಪದ ವೇದಿಕೆ ಪದಾಧಿಕಾರಿಗಳಾದ ಡಾ.ಶೀಲಾ ಹೊಸಮನೆ, ಡಾ.ಎಂ.ಜಿ.ಉಪಾಧ್ಯಾಯ, ಮಹೇಶ್ ಶೆಟ್ಟಿ, ರಮೇಶ್ ಪಂಡಿತ್ ಉಪಸ್ಥಿತರಿದ್ದರು.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಶ್ರೀಕ್ಷೇತ್ರ ಗೋಕರ್ಣದಲ್ಲಿ ನಿತ್ಯ, ನಿರಂತರ ಕಲಾಸೇವೆ: ರಾಘವೇಶ್ವರ ಶ್ರೀಗಳು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*