ಚಿಂತಾಜನಕ ಸ್ಥಿತಿಯಲ್ಲಿರುವ ತಾಯಿಯ ಸಹಾಯಕ್ಕೆ ನೆರವಾಗುವಿರಾ?

  • ಆಶಿಕ್ ಕುಕ್ಕಾಜೆ (phone: 9591557448)

 ಇದು ಒಂದು ತಾಯಿಯ ಕರುಣಾಜನಕ ಕಥೆ. ಪುತ್ತೂರು ತಾಲೂಕಿನ ಐತೂರು ಗ್ರಾಮದ ಮೂಜೂರು ಎಂಬಲ್ಲಿ ವಾಸಿಸುತ್ತಿರುವ ದಿವಂಗತ ಮೊಹಮ್ಮದ್ ಕಾಸಿಂ ರವರ ಪತ್ನಿ ಉಮೈಬಾ ಅವರ ಪರಿಸ್ಥಿತಿ ನೋಡಿದರೆ ಎಂಥವರ ಕಣ್ಣಲ್ಲೂ ನೀರು ಚಿಮ್ಮದಿರದು. ಕಳೆದ ಹತ್ತು ವರ್ಷಗಳಿಂದ ಗಂಡನನ್ನು ಕಳೆದುಕೊಂಡ ಉಮೈಬಾ ಕಷ್ಟದಿಂದ ಜೀವನ ಸಾಗಿಸುತ್ತಿರುವ ನಿರ್ಗತಿಕ ಕುಟುಂಬ. ಎರಡು ವರ್ಷದ ಹಿಂದೆ ತನ್ನ ಮನೆಯ ಹೊರಗೆ ಬಟ್ಟೆ ಒಣ ಹಾಕಲು ಮನೆಯ ಅಂಗಳಕ್ಕೆ ಹೋದಾಗ ಬಿದ್ದು ಗಾಯಗೊಂಡ ಉಮೈಬಾ ರವರ ಕಾಲು ಮುರಿದ ಪರಿಣಾಮವಾಗಿ ಶಸ್ತ್ರ ಚಿಕಿತ್ಸೆಯ ಮೂಲಕ ರಾಡ್ ಹಾಕಲಾಯಿತು. ತದನಂತರ ಮೂರು ಶಸ್ತ್ರ ಚಿಕಿತ್ಸೆಯೂ ನಡೆಯಿತು. ಸೊಂಟದ ಎಲುಬು ತೆಗೆದು ಕಾಲಿಗೆ ಇಡುವಂತೆ ವೈದ್ಯರು ತಿಳಿಸಿದಾಗ ಅದಕ್ಕೂ ಒಪ್ಪಿಕೊಂಡು ಚಿಕಿತ್ಸೆ ನಡೆಸಿದರು. ಆದರೆ ಯಾವುದೇ ಚಿಕಿತ್ಸೆಯಿಂದಲೂ ಫಲ ದೊರೆಯಲಿಲ್ಲ. ನಂತರ ಆರ್ಥಿಕ ಮುಗ್ಗಟ್ಟಿನಿಂದಾಗಿ ಮನೆಯಲ್ಲೇ ಉಳಿದುಕೊಂಡ ಉಮೈಬಾ ಅವರಿಗೆ ಊರವರು ಸೇರಿ ಸಣ್ಣ ಮನೆಯೊಂದನ್ನು ಕಟ್ಟಿಸಿ, ಧನಸಹಾಯ ಕೂಡಾ ಮಾಡಿದರು.

ಜಾಹೀರಾತು

ಆದರೆ ನಂತರ ಮೂಲೆ ಸೇರಿದ ಉಮೈಬಾ ರವರ ದೇಹದ ಎಲ್ಲಾ ಭಾಗದಲ್ಲಿ ಅಲರ್ಜಿ ತರಹದ ಹುಣ್ಣಾಯಿತು. ಇದರಿಂದ ಎದ್ದು ಕುಳಿತುಕೊಳ್ಳಲೂ ಆಗದೆ, ಮಲಗಲೂ ಆಗದೆ, ಶೌಚಾಲಯಕ್ಕೂ ಹೋಗಲಾಗದೆ ಚಿಂತಾಜನಕ ಸ್ಥಿತಿಯಲ್ಲಿ ಆದ ತಾಯಿ ಮಕ್ಕಳಿಗೆ ತಿನ್ನಲು ಆಹಾರ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಇದೀಗ ತಾಯಿ ಹಾಗೂ ಮಕ್ಕಳು ಆಹಾರಕ್ಕಾಗಿ ನೆರೆಮನೆಯವರನ್ನು ಆಶ್ರಯಿಸಿದ್ದಾರೆ. ಕುಟುಂಬಕ್ಕೆ ನೆರಮನೆಯವರು ದಿನಂಪ್ರತೀ ಊಟ ತಿಂಡಿಯ ವ್ಯವಸ್ಥೆ ಮಾಡುತ್ತಿದ್ದಾರೆ. ಮಕ್ಕಳಿಬ್ಬರೂ ಅಪ್ರಾಪ್ತರಾದುದರಿಂದ ತಾಯಿಯ ಶುಶ್ರೂಷೆ ಮಾಡುವಷ್ಟು ಶಕ್ತರಾಗಿಲ್ಲ. ವಯಸ್ಸಿಗೆ ಬಾರದ ಮಕ್ಕಳಿಬ್ಬರು ತಾಯಿಯಲ್ಲಿ ಅದು ಬೇಕು ಇದು ಬೇಕು ಎಂದು ಕೇಳುವಾಗ ಎಂಥಾ ಕಲ್ಲು ಹೃದಯವೂ ಕರಗಿ ಹೋಗಬಹುದು. ೫ನೇ ತರಗತಿಯಲ್ಲಿ ಕಲಿಯುತ್ತಿರುವ ಫಾತಿಮತ್ ಅಫ್ರೀದಾ ಮತ್ತು೬ ನೇ ತರಗತಿಯಲ್ಲಿ ಕಲಿಯುತ್ತಿರುವ ಮುಹಮ್ಮದ್ ಅನಸ್ ಏನು ಮಾಡಲು ಸಾಧ್ಯ ಹೇಳಿ.

ಪ್ರಸ್ತುತ ಕಾಲಿನಲ್ಲಿ ರಾಡ್ ಇರುವ ನೋವಿನ ಜೊತೆಗೆ ದೇಹವಿಡೀ ಗಾಯದಿಂದಾಗಿ ಶರೀರವಿಡೀ ತುರಿಕೆಯಿಂದ ಕೂಡಿದ ತಾಯಿಯ ರೋಧನವು ನೋಡಲಸಾಧ್ಯ. ನೋವಿನೊಂದಿಗೆ ನರಳುವ ತಾಯಿ ತುರಿಸುವಾಗ ಶರೀರವಿಡೀ ರಕ್ತ ಸೋರಲು ಪ್ರಾರಂಭವಾಗುತ್ತದೆ. ಅತ್ತ ತನಗೆ ಚಿಕಿತ್ಸೆ ಮುಂದುವರಿಸಲಾಗದೇ ಇತ್ತ ಮಕ್ಕಳ ಪಾಲನೆ ಮಾಡಲಾರದೇ ಚಡಪಡಿಸುತ್ತಿರುವ ಅಸಹಾಯಕ ತಾಯಿಗೆ ಕೂಡಲೇ ಅವರಿಗೆ ಚಿಕಿತ್ಸೆ ಅಗತ್ಯವಿದ್ದು, ದಾನಿಗಳ ಮೊರೆ ಹೋಗಲಲ್ಲದೇ ಬೇರೆ ದಾರಿಯಿಲ್ಲದಾಗಿದೆ.

 ಆದುದರಿಂದ ನಮ್ಮ ಹೆತ್ತ ತಾಯಿಯ ಸ್ಥಾನದಲ್ಲಿರುವ ನಿರ್ಗತಿಕ ತಾಯಿ ಕೊಡುಗೈ ದಾನಿಗಳ ಸಹಕಾರವನ್ನು ಎದುರು ನೋಡುತ್ತಿದ್ದು, ತಾಯಿಗೆ ನೆರವಾಗಬೇಕಾಗಿ ತಮ್ಮಲ್ಲೆರಲ್ಲೂ ವಿನಮ್ರವಾಗಿ ವಿನಂತಿಸುತ್ತಿದ್ದೇನೆ. ತಾಯಿಯ ಕುರಿತ ಹೆಚ್ಚಿನ ಮಾಹಿತಿಗಾಗಿ 7760484395 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ ತಿಳಿಸಿದ್ದಾರೆ.

ಜಾಹೀರಾತು

Bank Name: Vijaya Bank
Account holder name: Umaiba
Account No.: 116201011000119
Branch: Nettana
IFS Code: VIJB0001162

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಚಿಂತಾಜನಕ ಸ್ಥಿತಿಯಲ್ಲಿರುವ ತಾಯಿಯ ಸಹಾಯಕ್ಕೆ ನೆರವಾಗುವಿರಾ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*