ಕಲ್ಲಡ್ಕದಲ್ಲಿ ನವದಂಪತಿ ಸಮಾವೇಶಕ್ಕೆ 145 ನವಜೋಡಿ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ  ನಡೆದ 18ನೇ ವರ್ಷದ ನವದಂಪತಿ ಸಮಾವೇಶದಲ್ಲಿ 145 ಜೊತೆ ದಂಪತಿ ಪಾಲ್ಗೊಂಡಿದ್ದರು.

ಜಾಹೀರಾತು

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ, ಮಾತುಗಳನ್ನಾಡಿ ವಧೂವರರು ಎಂದರೆ ಲಕ್ಷ್ಮೀನಾರಾಯಣರ ಸ್ವರೂಪರು ಎಂದರು.

ನಮ್ಮ ಜೀವನದಲ್ಲಿರುವಂತಹ ಮಹತ್ವಪೂರ್ಣವಾದ ಘಟ್ಟ. ಕುಟುಂಬ ಎಂದರೆ ಧರ್ಮ, ಸಂಸ್ಕೃತಿಯ ಕೇಂದ್ರಬಿಂದು. ’ಧನ್ಯೋಗೃಹಸ್ಥಾಶ್ರಮಎಲ್ಲರಿಂದಲೂ ಶ್ರೇಷ್ಠವಾದುದು. ನಮ್ಮದೇಶ ಉಳಿಯುವುದು ಜನಸಂಖ್ಯೆಯ ಆಧಾರದ ಮೇಲೆ. ಸುಂದರವಾದ ದಾಂಪತ್ಯಜೀವನ ನಿಮ್ಮದಾಗಲಿ ಎಂದು ಹಾರೈಸಿದರು.

ಜ್ಯೇಷ್ಠ ಪ್ರಚಾರಕರು, ಕುಟುಂಬ ಪ್ರಬೋಧನ್ ಸಹಸಂಯೋಜಕ ಸು.ರಾಮಣ್ಣ ನವದಂಪತಿಗೆ ಹರಸಿ ಮಾರ್ಗದರ್ಶನ ಮಾಡಿದರು. ನಮ್ಮ ಮನೆಯ ರೀತಿ ನೀತಿ ಅತಿಥಿ ದೇವೋಭವ ಮತ್ತು ಉತ್ತಮ ಪರಂಪರೆಯಿಂದ ಕೊಡಬೇಕು. ನಮ್ಮದೇ ಆದ ಕುಟುಂಬವನ್ನು ನಾವು ಉಳಿಸಿ ಬೆಳೆಸಬೇಕು. ಮದುವೆ ಆದ ನಂತರವೂ ನಮ್ಮ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು. ನಮ್ಮ ಭಾಷೆಯನ್ನು, ನಮ್ಮ ಮನೆಯನ್ನು ಭಾರತೀಯ ಮನೆಯನ್ನಾಗಿ ಮಾಡುವುದು ನಮ್ಮಕರ್ತವ್ಯ ಎಂದು ಅವರು ಮಾತನಾಡಿದರು. ಹಿರಿಯ ದಂಪತಿಗಳಾಗಿ ಪಟ್ಲಗುತ್ತು ಮಹಾಬಲ ಶೆಟ್ಟಿ ಮತ್ತು ಲಲಿತಾ ದಂಪತಿಗಳು ಆಗಮಿಸಿದ್ದರು.

ಜಾಹೀರಾತು

ರಾಜ್ಯದ ವಿವಿಧ ಭಾಗಗಳಿಂದ ಇತ್ತೀಚೆಗೆ ಮದುವೆ ಆದ ದಂಪತಿಗಳು ಆಗಮಿಸಿದ ಸಂದರ್ಭ ಮಾತೃಮಂಡಳಿಯ ಮುತ್ತೈದೆಯರು ಕೈಕಾಲುಗಳಿಗೆ ನೀರಿತ್ತು ಪಣ್ಣೀರು ಚಿಮುಕಿಸಿ ಆರತಿ ಬೆಳಗಿ ಅರಸಿನ ಕುಂಕುಮ ನೀಡಿ  ಸಾಂಪ್ರದಾಯಿಕ ನಗುಮುಖದ ಸ್ವಾಗತ ನೀಡಿದರು. ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಹಾಗೂ ಸಂಚಾಲಕರಾದ ವಸಂತ ಮಾಧವ ಉಪಸ್ಥಿತರಿದ್ದರು. ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು. ಮಾತೃ ಮಂಡಳಿಯ ಸದಸ್ಯರುಗಳಾದ ಶೋಭಾ ಪ್ರಾರ್ಥಿಸಿದರು. ಪ್ರೇಮ ನಾರಾಯಣಗೌಡ ಸ್ವಾಗತಿಸಿವೀಕ್ಷಿತಾ ರವಿರಾಜ್‌  ವಂದಿಸಿದರು. ಮಂಜುಳಾ ನಿರೂಪಿಸಿದರು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕಲ್ಲಡ್ಕದಲ್ಲಿ ನವದಂಪತಿ ಸಮಾವೇಶಕ್ಕೆ 145 ನವಜೋಡಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*