www.bantwalnews.com – ಸಂಪಾದಕ: ಹರೀಶ ಮಾಂಬಾಡಿ
- ಬಂಟ್ವಾಳ, ಬೆಳ್ತಂಗಡಿ ಸಹಿತ ದ.ಕ.ಜಿಲ್ಲೆಯ ಅಲ್ಲಲ್ಲಿ ಮಳೆ
- ಕೆಲವೆಡೆ ಕೈಕೊಟ್ಟ ಕರೆಂಟ್, ಬೆಳಗ್ಗೆಯೇ ಗುಡುಗಿನ ಸದ್ದು
ಜಾಹೀರಾತು
ಸೌರಮಾನ ಯುಗಾದಿ (ವಿಷು ಹಬ್ಬ) ಆಚರಣೆಯ ದಿನವಾದ ಭಾನುವಾರ ಬೆಳಗ್ಗೆ ಬಿ.ಸಿ.ರೋಡ್, ಬಂಟ್ವಾಳ ಸಹಿತ ದಕ್ಷಿಣ ಕನ್ನಡದ ನಿವಾಸಿಗಳಿಗೆ ದಟ್ಟ ಮೋಡ ಮತ್ತು ಮಳೆಯ ಸ್ವಾಗತ. ಕೆಲವೆಡೆ ಸೂರ್ಯೋದಯದ ಸೌಂದರ್ಯವನ್ನೇ ನೋಡಲಾಗದಷ್ಟು ಕಪ್ಪು ಮೋಡ ಆವರಿಸಿದ್ದರೆ, ಹಲವೆಡೆ ತುಂತುರು ಮಳೆಯಾಗಿದೆ.
ಬಂಟ್ವಾಳದಲ್ಲಂತೂ ರಾತ್ರಿಯಿಡೀ ಆಗಾಗ ವಿದ್ಯುತ್ ಕೈಕೊಟ್ಟು ಸಮಸ್ಯೆ ಉಂಟುಮಾಡಿತು. ವಿದ್ಯುತ್ ತಂತಿಗಳಲ್ಲಿ ಹನಿ ಬಿದ್ದರೂ ಕಡಿತ ಗ್ಯಾರಂಟಿ ಎಂಬ ನಾಗರಿಕರ ಹಾಸ್ಯಮಿಶ್ರಿತ ಟೀಕೆಯನ್ನೇ ಬಲಗೊಳಿಸುವಂತೆ ಕರೆಂಟು ಆಗಾಗ ಕೈಕೊಟ್ಟರೆ, ಗುಡುಗಿನ ಆರ್ಭಟ ಭಾನುವಾರವನ್ನು ಸ್ವಾಗತಿಸಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವಿಷುವಿನ ದಿನ ವರುಣನ ಸಿಂಚನ"