ಮರಳು ಲಾರಿಗಳು ಜಿಪಿಎಸ್ ಅಳವಡಿಸಿ ಮತ್ತು ನಿಯಮಬಾಹಿರವಾಗಿ ಸಂಚಾರ ನಡೆಸುತ್ತವೆಯೋ, ಇಲ್ಲವೋ ಎಂಬುದನ್ನು ಶನಿವಾರ ದಿನವಿಡೀ ಬಿ.ಸಿ.ರೋಡ್ ನಾರಾಯಣಗುರು ವೃತ್ತದ ಬಳಿ ಪಹರೆ ಕಾದ ಪೊಲೀಸರು ತಪಾಸಣೆ ನಡೆಸಿದರು. ಈ ಸಂದರ್ಭ ಒಟ್ಟು 16 ಲಾರಿಗಳು ಜಿಪಿಎಸ್ ಅಳವಡಿಸದೆ ಸಂಚರಿಸುತ್ತಿದ್ದುದು ಪತ್ತೆಯಾಗಿದ್ದು, ಅವುಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸುಪರ್ದಿಗೆ ಒಪ್ಪಿಸಲಾಗಿದೆ. ಪ್ರೊಬೆಷನರಿ ಐಪಿಎಸ್ ಅಕ್ಷಯ್ ಎಂ.ಹಾಕೆ, ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ.ಪ್ರಸನ್ನ ಕುಮಾರ್, ನಗರ ಠಾಣಾ ಪಿಎಸ್ಐ ಚಂದ್ರಶೇಖರ್, ಅಪರಾದ ವಿಭಾಗದ ಪಿ.ಎಸ್.ಐ ಹರೀಶ್, ಟ್ರಾಫಿಕ್ ಪೋಲೀಸ್ ಠಾಣೆಯ ಪಿ.ಎಸ್.ಐ.ಯಲ್ಲಪ್ಪ ಕಾರ್ಯಾಚರಣೆ ನಡೆಸಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮರಳು ಲಾರಿಗಳ ವಿರುದ್ಧ ಕಾರ್ಯಾಚರಣೆ: 16 ಲಾರಿ ವಶಕ್ಕೆ"