ಜನರಿಗಾಗಿ ನದಿ ದಾಟುವ ದೈವಗಳು

  • ಚಂದ್ರಶೇಖರ ಪಾತೂರು

www.bantwalnews.com

ಜಾಹೀರಾತು

ಭಾಷಾವಾರು ಪ್ರಾಂತ್ಯ ವಿಂಗಡನೆಯ ಸಂದರ್ಭದಲ್ಲಿ ಕೇರಳ ರಾಜ್ಯದ ಭಾಗವಾಗಿ ಹೋದ ಕಾಸರಗೋಡು ಜಿಲ್ಲೆಯ ಹಲವಾರು ಧಾರ್ಮಿಕ ಆಚರಣೆಗಳು ದಕ್ಷಿಣ ಕನ್ನಡ ಜಿಲ್ಲೆಯ ಆಚರಣೆಗೆ ಸಾಮ್ಯತೆಯನ್ನು ಹೊಂದಿವೆ. ಕಾಸರಗೋಡು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ಆರಾಧಾನಾ ಸಂಪ್ರದಾಯ ತೆಯ್ಯಂ. ಇದು ನಮ್ಮಲ್ಲಿ ಪ್ರಚಲಿತದಲ್ಲಿರುವ ದೈವರಾಧನೆಯನ್ನು ಹೋಲುವ ಕಲಾರೂಪ. ತುಳುನಾಡಿನ ದೈವಗಳಿಗೆ ಪಾಡ್ದನವಿದ್ದರೆ ಇಲ್ಲಿತೋಟ್ಟಂ ಎಂಬ ಪ್ರಕಾರವಿದೆ.

ಕಾಞಂಗಾಡ್ ಕಾಸರಗೋಡು ಜಿಲ್ಲಾ ಕೇಂದ್ರದಿಂದ 28 ಕಿ.ಮೀ. ದೂರದಲ್ಲಿದೆ. ಮಲಯಾಳಂ ಮಾತೃ ಭಾಷೆಯ ನೆಲವಾದರೂ ಇಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬಗಳು ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದು ತುಳು, ಕೊಂಕಣಿ ಹಾಗೂ ಕನ್ನಡ ಭಾಷೆಗಳನ್ನಾಡುವವರು ಕಾಣಸಿಗುತ್ತಾರೆ. ನಿತ್ಯಾನಂದ ಸ್ವಾಮಿ ಧ್ಯಾನಸ್ಥರಾಗಿದ್ದ ಗುಹೆಗಳು, ಹೊಸದರ್ಗ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆ.

ಕಾಞಂಗಾಡ್ ಪೇಟೆಯ ಹೊರವಲಯದಲ್ಲಿರುವಅರೆಯಿ ಎಂಬ ಪ್ರಶೇದವು ಭತ್ತ, ತೆಂಗು ಹಾಗೂ ಬಾಳೆಯ ಬೆಳೆಗೆ ಪ್ರಸಿದ್ಧವಾಗಿದೆ. ಅರೆಯಿ ಸಮೀಪದ ಕಾರ್ತಿಕ ಎಂಬಲ್ಲಿ ಪ್ರತೀವರ್ಷ ನಡೆಯುವತೈಯಂ ರಾಜ್ಯದಲ್ಲೇ ವಿಶಿಷ್ಠತೆಯಿಂದ ಕೂಡಿದೆ. ಇಲ್ಲಿ ಆರಾಧನೆಗೊಂಡ ದೈವಗಳು ನದಿಯನ್ನು ದೋಣಿಯ ಮೂಲಕ ದಾಟಿಅರೆಯಿ ಯಲ್ಲಿರುವ ದೈವವನ್ನು ಭೇಟಿ ಮಾಡುವ ಸಂಪ್ರದಾಯವೇ ಇದಕ್ಕೆ ಕಾರಣ.

ಜಾಹೀರಾತು

ಸಾಮಾನ್ಯವಾಗಿ ವೀರರ ಆರಾಧನೆಯ ಪ್ರತೀಕವಾಗಿ ರೂಪು ಪಡೆಯುವತೆಯ್ಯಂ ಪ್ರದೇಶದಲ್ಲೂ ಇದೇ ಹಿನ್ನಲೆಯನ್ನು ಹೊಂದಿದೆ ಎಂದು ಕ್ಷೇತ್ರದ ಮುಖ್ಯ ಸ್ಥರಾದ ಕುಂಞಿ ಕೃಷ್ಣನ್ ಅಭಿಪ್ರಾಯ ಪಡುತ್ತಾರೆ. ಭತ್ತವನ್ನೇ ಪ್ರಧಾನ ಬೆಳೆಯನ್ನಾಗಿ ಬೆಳೆಯುತ್ತಿದ್ದ ಇಲ್ಲಿನ ರೈತರಿಗೆ ಪ್ರತೀ ವರ್ಷ ನೆರೆನೀರು ನುಗ್ಗಿ ಬೆಳೆಹಾನಿ ಸಂಭವಿಸುತ್ತಿದ್ದ ಸಂದರ್ಭ ರೈತರ ರಕ್ಷಣೆಗಾಗಿ ದೈವವು ಇಲ್ಲಿ ನೆಲೆಯಾಯಿತು ಎಂಬುದು ನಂಬಿಕೆ. ಹೊಳೆಯ ಆಚೆ ದಡದಲ್ಲಿರುವ ಅರಸರಲ್ಲಿ ಪ್ರಜೆಗಳು ತಮ್ಮ ಕಷ್ಟಗಳನ್ನು ನೇರವಾಗಿ ಹೇಳಿಕೊಳ್ಳಲಾಗದ ಸಂದರ್ಭದಲ್ಲಿ ಅರಮನೆಯ ದೈವಗಳ ಜತೆ ಇಲ್ಲಿನ ದೈವಗಳ ಭೇಟಿಯ ಸಂದರ್ಭ ಕಷ್ಟ ಸುಖಗಳನ್ನು ಹೇಳಿಕೊಳ್ಳವ ಸಂಪ್ರದಾಯವಿತ್ತು. ಸಂಬಂಧ ಇಂದೂ ಮುಂದುವರಿದಿದೆ ಎಂದು ಕುಂಞಿಕೃಷ್ಣನ್ ಹೇಳುತ್ತಾರೆ.

ಪ್ರತೀ ವರ್ಷ ತುಲಾ ಮಾಸ 10 ಮತ್ತು 11 ರಂದು ನಡೆಯುವ ಕಳಿಯಾಟ್ಟ ಉತ್ಸವವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತ ಜನರು ಸೇರುತ್ತಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಜನರಿಗಾಗಿ ನದಿ ದಾಟುವ ದೈವಗಳು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*