ಹೆದ್ದಾರಿ ತುಂಬಾ WORRY

  • ಪಾಣೆಮಂಗಳೂರಿನಲ್ಲಿ ಸ್ವಿಮ್ಮಿಂಗ್ ಪೂಲ್
  • ಟ್ರಾಫಿಕ್ ಠಾಣೆ ಪಕ್ಕವೇ ಮರಣಗುಂಡಿ
  • ದಾಸಕೋಡಿಯಲ್ಲಿ ಏರುದಿಣ್ಣೆಗಳ ನೋಟ
  • ಇದು ಮಂಗಳೂರು-ಬೆಂಗಳೂರು ಹೆದ್ದಾರಿ

ಹರೀಶ ಮಾಂಬಾಡಿ

ಚಿತ್ರ: ಯಶವಂತ್

ಜಾಹೀರಾತು

ಮಂಗಳೂರಿನಿಂದ ಬೆಂಗಳೂರಿಗೆ ತೆರಳುವವರು ಇಲ್ಲಿ ಗಮನಿಸಿ. ಬಿ.ಸಿ.ರೋಡಿನಿಂದ ಮಾಣಿವರೆಗಿನ ರಸ್ತೆ ಸರಿ ಇಲ್ಲ. ಭವಿಷ್ಯದಲ್ಲಿ ರಸ್ತೆ ಸಂಪೂರ್ಣ ಅಭಿವೃದ್ಧಿ, ಅಗಲಗೊಳ್ಳುವ ಚತುಷ್ಪಥ ಕಾಮಗಾರಿ ಯೋಜನೆ ಆರಂಭಗೊಂಡು ಮುಗಿಯುವವರೆಗೂ ಇದೇ ಪರಿಸ್ಥಿತಿ. ತಾತ್ಕಾಲಿಕವಾಗಿಯಾದರೂ ರಿಪೇರಿ ಮಾಡಲು ಯಾರೂ ದೊಡ್ಡ ಮನಸ್ಸು ಮಾಡುತ್ತಿಲ್ಲ!

ಬಿ.ಸಿ.ರೋಡ್ ನಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪಾಣೆಮಂಗಳೂರು, ಮೇಲ್ಕಾರ್, ದಾಸಕೋಡಿ ಈಗ ಅಪಾಯದ ಸ್ಪಾಟ್ ಗಳಾಗಿವೆ.

ಜಾಹೀರಾತು

ಪಾಣೆಮಂಗಳೂರು ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನ ಸನ್ನಿಧಿಯ ಎದುರು ನರಿಕೊಂಬು – ಶಂಭೂರು ಕಡೆಗೆ ತೆರಳುವ ರಸ್ತೆಯ ಪಕ್ಕ ಇಡೀ ಜಾಗ ಕೆರೆಯಂತೆ ಮಾರ್ಪಾಟಾಗಿದೆ.  ಕಳೆದ ಮೂರು ನಾಲ್ಕು ದಿನಗಳಿಂದ ಪೀಕ್ ಅವರ್ ನಲ್ಲಿ ವಾಹನಗಳ ಸಾಲು ಇಲ್ಲಿ ಕಾಣಸಿಗುತ್ತದೆ. ಪಾಣೆಮಂಗಳೂರು ಸ್ಟಾಪ್ ನೀಡುವ ಬಸ್ಸುಗಳು ಅನ್ಯಮಾರ್ಗವಿಲ್ಲದೆ ಹೈವೇಯಲ್ಲೇ ನಿಲ್ಲಿಸಬೇಕು. ಇಲ್ಲವಾದರೆ ಕೆಸರುಗುಂಡಿಯೊಳಗೆ ಬೀಳಬೇಕು. ಇಲ್ಲಿ ಕಾಂಕ್ರೀಟ್ ಮಿಶ್ರಿತ ಜಲ್ಲಿ ಹಾಕಿದರೆ ತಾತ್ಕಾಲಿಕವಾಗಿ ಪರಿಹಾರ ದೊರಕಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.


ಮೇಲ್ಕಾರಿನಲ್ಲಿರುವ ಬಂಟ್ವಾಳ ಟ್ರಾಫಿಕ್ ಠಾಣೆ ಪಕ್ಕವೇ ಬೃಹತ್ ಮರಣಗುಂಡಿ ಕಂಡುಬಂದಿದೆ. ಕಲ್ಲಡ್ಕ ಪಕ್ಕದ ದಾಸಕೋಡಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹೊಂಡಗಳ ದರ್ಬಾರು ಎದ್ದು ಕಾಣುತ್ತಿದೆ.

ಒಂದೋ ಆರೋಪ, ಪ್ರತ್ಯಾರೋಪ ಇಲ್ಲವೇ ಜನರ ತೆರಿಗೆ ದುಡ್ಡಿನಲ್ಲಿ ಸಂಗ್ರಹವಾದದ್ದನ್ನೇ ಮತ್ತೆ ಅವರಿಗೆ ಸೌಲಭ್ಯರೂಪದಲ್ಲಿ ಒದಗಿಸಿ, ತಮ್ಮಿಂದಲೇ ಆದದ್ದು ಎಂದು ಹೇಳುತ್ತಾ ಮುಂದಿನ ಚುನಾವಣೆಯ ಲಾಭ, ನಷ್ಟದ ಲೆಕ್ಕಾಚಾರ ನಡೆಸುವುದರಲ್ಲೇ ಮುಳುಗಿಹೋಗಿರುವ ರಾಜಕಾರಣಿಗಳು ತಾತ್ಕಾಲಿಕ ಪರಿಹಾರ ಒದಗಿಸಲು ಒಮ್ಮತ ಮೂಡಿಸಿಕೊಳ್ಳಬೇಕಾಗಿದೆ.

ಜಾಹೀರಾತು

VIDEO:

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಹೆದ್ದಾರಿ ತುಂಬಾ WORRY"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*