ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ14: ಪತ್ರಿಕಾರಂಗದ ಮೂರು ವಿಭಾಗಗಳಲ್ಲಿ ಹೆಚ್ಚಿನ ಕಲಿಕೆ

ಸಂಯುಕ್ತ ಕರ್ನಾಟಕದ ಬೆಂಗಳೂರು ಮುದ್ರಣದ ಪ್ರಾರಂಭಿಕ ಸಿದ್ಧತೆಗಳು ಕೊನೆಯ ಹಂತಕ್ಕೆ ಬಂದಿದ್ದಾಗ –
 
ಹುಬ್ಬಳ್ಳಿಯ ಭಾಷಾ ಪ್ರಯೋಗಗಳು ಪತ್ರಿಕೆಯ ಬೆಂಗಳೂರಿನ ಓದುಗರಿಗೆ ಪಥ್ಯವಾಗಲಾರವೆಂಬ ಮಾಹಿತಿಯ ಮುಖ್ಯ ಕಾರಣದಿಂದಾಗಿರಂಗನಾಥ ರಾಮಚಂದ್ರ ದಿವಾಕರರ ಹಿರಿತನದ ಸಂ.ಆಡಳಿತವರ್ಗಕೆಳಸ್ತರದ ಸಂಪಾದಕೀಯ ಸಿಬ್ಬಂದಿ ಸದಸ್ಯರನ್ನು ಬೆಂಗಳೂರಿನಿಂದಲೇ ಸಂಪಾದಿಸಿಕೊಂಡಿತ್ತುಆ ಸಂಪಾದನೆಯಲ್ಲಿ ತಾಯಿನಾಡುವಿನ ಕೆಲವರು ಪತ್ರಕರ್ತರೂ ಸೇರಿದ್ದರು.
 
ಅವರ ನೇಮಕದ ಸುದ್ದಿ ಅಲ್ಲಿಗೆ ಪ್ರವೇಶಿಸುವ ಪ್ರಯತ್ನವನ್ನೂ ತೀವ್ರಗೊಳಿಸಲು ನನಗೂ ಸೂಚನೆ ಕೊಟ್ಟಂತಾಯಿತು.
 
ಆ ಮೊದಲೇ ಪರಿಚಯ ಮಾಡಿಕೊಂಡಿದ್ದ ಮುಖ್ಯ ವರದಿಗಾರ ಕೆ.ಶಾಮರಾವ್ ಮತ್ತು ಪುರವಣಿ ವಿಭಾಗ ಪ್ರಮುಖ ಮಾ.ನಾ.ಚೌಡಪ್ಪ ಇವರಿಂದ ತೊಡಗಿಅವರೆಗೂ ಪರಿಚಯ ಇರದಿದ್ದ ಸುದ್ದಿ ಸಂಪಾದಕ ಸುರೇಂದ್ರ ದಾನಿ ಸಹಾಯಕ ಸಂಪಾದಕ ರಾವ್ ಬಹಾದ್ದೂರ್ಪ್ರಮುಖ ಆಡಳಿತಾಧಿಕಾರಿ ಕೌಜಲಗಿ ಇವ್ರೆಲ್ಲರ ದರ್ಶನವನ್ನೂ ಹಂತಹಂತವಾಗಿ ನೆರವೇರಿಸಿದೆ. ‘ದಾರ್ಶನಿಕರ’ ಹಂತವು ಏರುತ್ತಿದ್ದ ಹಾಗೆನೌಕರಿಯ ಸಾಧ್ಯತೆ ಇಳಿಯತೊಡಗಿದಂತೆ ಭಾಸವಾಯಿತು.
 
ನನಗೆ ಉದ್ಯೋಗ ಕೊಡಲು ಮೇಲಿನವರು ಹಿಂದೇಟು  ಹೊಡೆಯುತ್ತಿರುವುದರ ಹಿನ್ನೆಲೆಕಾರಣ ಬಹಳ ಕ್ಷುಲ್ಲಕವಾದುದುಅದನ್ನು ಒತ್ತಟ್ಟಿಗೆ ಸರಿಸಿಪ್ರಭಾವದ ಮೂಲಕವಾದರೂ ನೌಕರಿ ದೊರಕಿಸಿಕೊಳ್ಳಲು ಪ್ರಯತ್ನಿಸುತ್ತೇನೆಂದು ಹೊರಟೆಪತ್ರಿಕೆಗೆ ಆರ್ಥಿಕ ಸವಲತ್ತು ಒದಗಿಸುತ್ತಿದೆ ಕೆನರಾ ಬ್ಯಾಂಕಿನ ಮುಖ್ಯ ಪ್ರಬಂಧಕ ಭಂಡಾರಿಯವರಿಂದ ‘ಒಂದು ಮಾತು’ ಹೇಳಿಸಿದೆಅದು ಭಾಗಶಃ ಸಾರ್ಥಕವಾಯಿತು.
 
ಹಾಗಾಗಿ ರೆಸಿಡೆನ್ಸಿ ರಸ್ತೆಗೆ ನಿತ್ಯನಿರಂತರ ಭೇಟಿಗಳು ನಡೆಯುತ್ತಲೇ ಇದ್ದ ಯಾವುದೋ ಒಂದು ‘ಘಳಿಗೆಯಲ್ಲಿ.
 
ಬೇಕಾದರೆ” ಚಲನಚಿತ್ರಗಳ ವಿಮರ್ಶೆಯನ್ನು ಪ್ರತಿವಾರವೂ ಒದಗಿಸುವ ಕೆಲಸ ಮಾಡಬಹುದುಆದರೆವಿಮರ್ಶೆಗಳು ಎಷ್ಟೇ ಇದ್ದರೂ ಮಾಸಿಕ ಸಂಭಾವನೆಯಾಗಿ 110ರೂಮಾತ್ರವೇ ಕೊಡಲಾಗುವುದೆಂಬ ಮೌಖಿಕಾದೇಶ ಮೇಲಿನಿಂದ ಬಂದಿತು. “ಅದಾದರೂ ಸಾಕುಮುಂದಿನ ವಾರದಿಂದಲೇ ಚಿತ್ರವಿಮರ್ಶೆಗಳನ್ನು ಒಪ್ಪಿಸುತ್ತೇನೆ” ಎಂದು ಆದೇಶವನ್ನು ಮುಟ್ಟಿಸಿದವರಿಗೆ ತಿಳಿಸಿದೆಪಂಚಾವತ ಸ್ವೀಕಾರಕ್ಕೆ ಮಾನಸಿಕ ಸಿದ್ಧತೆ ಮಾಡಿಕೊಳ್ಳತೊಡಗಿದೆ.ಅದರಿಂದಾಗಿ ಕಾಂಗ್ರೆಸ್ ಭವನದಲ್ಲಿ ‘ಕಾಣ್ಕೆಯ ಹಾಜರಿ’ ಕಡಿಮೆ ಮಾಡಿಸಂದೇಶವನ್ನು ಮುದ್ರಿಸುತ್ತಿದ್ದ (ಸಂ.ಕಚೇರಿಗೂ ಸಮೀಪವಾಗಿದ್ದಓರಿಯೆಂಟಲ್ ಪ್ರೆಸ್ಸಿನಲ್ಲೇ ಪತ್ರಿಕೆಯ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದೆ.
 
ಆಗೊಂದು ದಿನ ಮುದ್ರಣಾಲಯಕ್ಕೆ ಬಂದಿದ್ದ ಸಂಪಾದಕ ಹೆಗಡೆ “ಅರೆನೀವು ಇಲ್ಲಿದ್ದೀರಾ ? ಕಾಣದೆ ಕೆಲವು ದಿನ ಆಯಿತುಎಂದವರೇ ಒಂದೆರಡು ಔಪಚಾರಿಕ ಮಾತುಗಳನ್ನಾಡಿ ನನ್ನನ್ನು ಹೊರಗೆ ಕರೆದರುನನ್ನ ಹಾಜರಿ ಲೋಪದ ಹಿನ್ನೆಲೆಯನ್ನು(ನಯವಾದ ಮಾತುಗಳ ಮೂಲಕನನ್ನಿಂದಲೇ ಹೊರಡಿಸಿದರುಅದರೊಂದಿಗೇ – ಮಾಸಪತ್ರಿಕೆಗಿಂತಲೂ ದೈನಿಕ ಪತ್ರಿಕೆಯ ಕೆಲಸವೇ ನನಗೆ ಹೆಚ್ಚಿನ ಆಸಕ್ತಿಯದು – ಎಂದು ಬಾಯ್ಬಿಡುವಂತೆಯೂ ಮಾಡಿದರು.
 
ಸರಿಹಾಗಾದ್ರೆನಿಮ್ಮಿಷ್ಟನಾನೇನೋ ನಿಮ್ಮನ್ನು ನಾಗಪುರಕಾಂಗ್ರೆಸ್ಸೆಶ್ಶನಿಗೆ ಕಾಂಗ್ರೆಸ್ ಸಂದೇಶದ ಪ್ರತಿನಿಧಿಯಾಗಿ ಕರಕೊಂಡು ಹೋಗೋಣ ಅಂತಿದ್ದೆ” ಎಂಬ ಅವರ ‘ಕೊನೆಯ’ ಆಮಿಷವೂ ನನ್ನ ಮೊಂಡುತನದೆದುರು ನಿರರ್ಥಕವಾಯಿತು.
 
ಸಂಯುಕ್ತ ಕರ್ನಾಟಕದಲ್ಲಿ ತಲೆತೂರಿಸಿದ ಮೊದಲನೆ ತಿಂಗಳಿನಲ್ಲಂತೂ ನನ್ನದು ಆರಂಭಶೂರನ ಸಂಭ್ರಮವಾಗಿತ್ತುಹಣದ ಬದಲಿಗೆ ಸ್ಥಾನಗೌರವವನ್ನಷ್ಟೇ ಒದಗಿಸುತ್ತಿದ್ದ ಶಕ್ತಿಗೆ ದಿನಕ್ಕೆ ಒಂದು ಸಣ್ಣ ವರದಿಯ ಟೆಲಿಗ್ರಾಂ ಕಳುಹಿಸಿಸಂ..ಕ್ಕೆ ಬಂದು ವಿಮರ್ಶಿಸಬೇಕಾದ ಚಿತ್ರದ ‘ಪಾನ್ನ ಬಗ್ಗೆ ಮೊದಲು ವಿಚಾರಿಸಿಸಾಧ್ಯ ಇದ್ದಷ್ಟೂ ಹೊತ್ತು (ಕೇಳಿ ಪಡೆದ (ಸಾಪ್ತಾಹಿಕ ಪುರವಣಿಯಸುತ್ತುಕೆಲಸ’ ಮಾಡಿ ಮುಗಿಸಿದ ಮೇಲೆ, –ಇದ್ದರೆ – ವಿಮರ್ಶಿಸಬೇಕಾದ ಚಿತ್ರವನ್ನು ನೋಡಲು ಹೋಗಿ ಮನೆಗೆ ಬರುವಾಗ (ವಾರದಲ್ಲಿ ಮೂರು ದಿನವಾದರೂಸರಿರಾತ್ರಿಯಾಗುತ್ತಿತ್ತುತೂಕಡಿಕೆ ತುಂಬಿದ ಭಾರ್ಯಾದರ್ಶನವನ್ನೂ ಗಣನೆಗೆ ತಾರದಷ್ಟುಕರ್ತವ್ಯನಿಷ್ಠೆ’ ನನ್ನಲ್ಲಿ ತುಂಬಿತ್ತು ಎನ್ನುವುದೇ ಆಗಿನ ಬಗೆಗೆ (ಈಗಿರುವಸಮಾಧಾನ.
 
ತಿಳಿದುಕೊಳ್ಳಲೇಬೇಕಾದ ಹಲವು ಹೊಸ ವಿಷಯಗಳು ಸಂ..ದಲ್ಲಿ ಇದ್ದವು. ‘ಹೇಳಿ ಕೊಡುವವರು ಯಾರೂ ಇಲ್ಲ,ಮಾಡುವವರನ್ನು ನೋಡಿಯೇ ಕಲಿಯಬೇಕಷ್ಟೆಆದ್ದರಿಂದ ಹೊಸದೇನಿದ್ದರೂ ನೋಡಿ ತಿಳಿದುಕೊಸಂಗ್ರಹಿಸಿದ ಮಾಹಿತಿಯನ್ನು ತಲೆಯಲ್ಲಿ ಉಳಿಸಿಕೊ” ಎಂಬ ಸಿದ್ಧಾಂತವನ್ನು ಅದಾಗಲೆ ರೂಪಿಸಿಕೊಂಡು ಜಾರಿಗೆ ತಂದಿದ್ದೆ.
 
ಅದರಿಂದಾಗಿಪತ್ರಿಕಾರಂಗದ ಮೂರು ವಿಭಾಗಗಳಲ್ಲಿ ಹೆಚ್ಚಿನ ಕಲಿಕೆ ಸಾಧ್ಯವಾಯಿತು.
 
ಮೊದಲನೆಯದುವರದಿಗಾರಿಕೆಯಲ್ಲಿನ ಓರಣಕ್ಕೆ ಸಂಬಂಧಿಸಿದುದುಶಕ್ತಿಯ ಪ್ರತಿನಿಧಿಯ ನೆಲೆಯಲ್ಲಿ ಇತರ ಅನುಭವಿಗಳೊಂದಿಗೆ ಬೆರೆತುಅವರ ಕಾರ್ಯವಿಧಾನಗಳನ್ನು ಹತ್ತಿರದಿಂದ ನೋಡುವ ಅವಕಾಶ ಇದ್ದ ಕಾರಣಮುಖ್ಯವಾಗಿ ಅಧಿಕೃತ ವಲಯ ಮತ್ತು ವಿಧಾನಮಂಡಲಗಳ ಚಟುವಟಿಕೆಗಳ ವರದಿಗಳಲ್ಲಿ ಅಗತ್ಯವಾಗಿ ವಹಿಸಬೇಕಾದ ಎಚ್ಚರಿಕೆಯ ಅಂಶಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು.
 
ಎರಡನೆಯದಾಗಿ ಟೆಲಿಪ್ರಿಂಟರ್ ನಲ್ಲಿ ರೋಮನ್ (ಇಂಗ್ಲಿಷ್ಲಿಪಿ ಉಪಯೋಗಿಸಿ ಕನ್ನಡದಲ್ಲಿ ವರದಿ ಕಳುಹಿಸುವ ಕ್ರಮ.
 
ಸಂಯುಕ್ತ ಕರ್ನಾಟಕದಲ್ಲಿ ಹುಬ್ಬಳ್ಳಿ – ಬೆಂಗಳೂರುಗಳ ಮಧ್ಯೆ ಸ್ವಂತದ ಟೆಲಿಪ್ರಿಂಟರ್ ಸಂಪರ್ಕದ ವ್ಯವಸ್ಥೆ ಆಗಿತ್ತುಕಚೇರಿಗಳ ಪರಸ್ಪರ ಸಂದೇಶ ವಿನಿಮಯಕ್ಕೆ ಕನ್ನಡದ ಉಪಯೋಗವಾಗುತ್ತಿದ್ದುದನ್ನು ಒಮ್ಮೆ ನೋಡಿದೆಅನಂತರಟೆಲಿಪ್ರಿಂಟರ್ ಆಪರೇಟರ್ ಪ್ರಹ್ಲಾದ ಕುಳಲಿಯವರ ‘ದೋಸ್ತಿ’ ಬೆಳೆಸಿಕನ್ನಡ ವಾಕ್ಯಗಳನ್ನು ಇಂಗ್ಲಿಷ್ ಲಿಪಿಯಲ್ಲಿ ಮೂಡಿಸುವುದನ್ನು ಕಲಿತುಕೊಂಡೆ.
 
ಕನ್ನಡದ ವಿಶಿಷ್ಟ ಅಕ್ಷರಗಳಿಗೆ (ಉದಾಹರಣೆಗೆಳ ಇತ್ಯಾದಿಇಂಗ್ಲಿಷ್ ಲಿಪಿಯ ಬಳಕೆ ಕಷ್ಟಕರವಾಗಿತ್ತುಉಚ್ಚಾರದ ಧ್ವನಿಭೇದಗಳನ್ನೂ ಮೂಡಿಸಲು ತೊಡಕಾಗುತ್ತಿತ್ತುಅವುಗಳಿಗೆ ಸಂ..ದಲ್ಲೇ ಕಲ್ಪಿಸಲಾಗಿದ್ದ ಪರಿಹಾರ ವಿಧಾನಗಳನ್ನು ತಿಳಿದುಕೊಂಡರೂಬಳಕೆಗೆ ತರಲಾಗದ ಕಾರಣ 
 
ಹೇಗಿದ್ದರೂ ಕನ್ನಡ ಬಲ್ಲವರೇ ಇಂಗ್ಲಿಷ್ ಲಿಪಿಯನ್ನು ಓದುತ್ತಾರೆಸಂದರ್ಭಕ್ಕೆ ತಕ್ಕಂತೆ ಅರ್ಥವಿಸುತ್ತಾರೆಆದ್ದರಿಂದಆ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಪ್ರಮೇಯವಿಲ್ಲವೆಂಬ ತೀರ್ಮಾನಕ್ಕೆ ಬಂದೆ.
 
ಮೂರನೆಯದುಪತ್ರಿಕೆಯ ಪುಟಗಳ ವಿನ್ಯಾಸಕ್ಕೆ ಸಂಬಂಧಿಸಿದುದುಹಿಂದೆ ಕಲಿತಿದ್ದ ವಿನ್ಯಾಸಕ್ರಮಗಳು ದಿನಪತ್ರಿಕೆಯ ಪುಟಗಳವುಸಾಪ್ತಾಹಿಕ ಪುರವಣಿಗೆ ಉಪಯುಕ್ತವೆನಿಸುವ ವಿನ್ಯಾಸಗಳ ಶಿಕ್ಷಣ ಅಗತ್ಯವಿತ್ತುಬರಹಗಳ ಗಾತ್ರವನ್ನು ಅವಶ್ಯಕತೆಗೆ ಅನುಸಾರವಾಗಿ ಕುಗ್ಗಿಸುವ (ಅಥವಾ ಹಿಗ್ಗಿಸುವಕ್ರಮಗಳನ್ನೂ ತಿಳಿಯಬೇಕಿತ್ತುಅವುಗಳನ್ನು ‘ನೋಡಿಕಲಿಯಲು’ ಸಂ..ದಲ್ಲಿ ಸಾಧ್ಯವಾಯಿತು.
 
ಕೆಲಸದ ಹೆಚ್ಚಿನ ಹೊರೆ ಇರಲಿಲ್ಲಒಳಗೆಹೊರಗೆಲ್ಲ ಸುತ್ತಾಡುವ ಸ್ವಾತಂತ್ರ್ಯವೂ ಇತ್ತುಆಕರ– ಆಧಾರಗಳನ್ನು ಹೊಂದಿಸಿಕೊಂಡಿದ್ದ ‘ಗ್ರಂಥಾಲಯಗಳ ಒಳಗೂ ಪ್ರವೇಶಿಸುತ್ತಿದ್ದೆಅಲ್ಲಿನ ವ್ಯವಸ್ಥೆಯನ್ನೂ ತಿಳಿದುಕೊಳ್ಳುತ್ತಿದ್ದೆ.
 
ಪಡೆಯುತ್ತಿದ್ದ ಸ್ವಯಂಶಿಕ್ಷಣದ ಬೆಳವಣಿಗೆಆಕಾಂಕ್ಷೆಗಳನ್ನೂ ಹೆಚ್ಚಿಸತೊಡಗಿತುಮುಂದಿನ ಕಾರ್ಯಾಚರಣೆಯತ್ತ ನನ್ನನ್ನು ನೂಕಿತು.    
 
(ಮುಂದಿನ ಭಾಗದಲ್ಲಿ)

ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ.  ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಪ.ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ). ಲೇಖನಮಾಲೆಯ 14ನೇ ಕಂತು .  ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಲೇಖಕ ಪ.ಗೋ. ಅವರದ್ದು.. ಇದು ಹೊಸ ದಿಗಂತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಬಳಿಕ 2005ರಲ್ಲಿ ಪುಸ್ತಕರೂಪದಲ್ಲಿ ಹೊರಬಂದ ಲೇಖನಮಾಲೆಯ ಮರುಪ್ರಕಟಣೆ.

ಜಾಹೀರಾತು
click the link
https://bantwalnews.com/2017/07/27/pa-go-series-12/

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ14: ಪತ್ರಿಕಾರಂಗದ ಮೂರು ವಿಭಾಗಗಳಲ್ಲಿ ಹೆಚ್ಚಿನ ಕಲಿಕೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*