ಪ್ರಚೋದನಕಾರಿ ಮೆಸೇಜ್ ಫಾರ್ವಾರ್ಡ್ ಮಾಡಿದರೆ ಕಾದಿದೆ ಶಿಕ್ಷೆ

ಸ್ಕ್ರೀನ್ ಶಾಟ್ ತೆಗೆದು 9480800941 ಅಥವಾ 9480805300 ನಂಬ್ರಕ್ಕೆ ಕಳಿಸಿ

ಮೊಬೈಲ್  ವಾಟ್ಸಾಪ್ ತೆರೆದೊಡನೆ ಯಾರದ್ದಾದರೂ ಅವಹೇಳನಕಾರಿ ಸಂದೇಶ, ಪ್ರಚೋದನಕಾರಿ ವಿಚಾರಗಳು ಇವೆಯೇ, ಅಂಥದ್ದನ್ನು ಫಾರ್ವಾರ್ಡ್ ಕೂಡ ಮಾಡಬೇಡಿ.

ಜಾಹೀರಾತು

ಅಂಥದ್ದೇನಾದರೂ ಕಂಡುಬಂದರೆ ಸ್ಕ್ರೀನ್ ಶಾಟ್ ತೆಗೆದು 9480800941 ಅಥವಾ 9480805300 ನಂಬ್ರಕ್ಕೆ ಕಳುಹಿಸಿ. ಪ್ರಚೋದನಕಾರಿ ಮೆಸೇಜ್ ಫಾರ್ವಾರ್ಡ್ ಮಾಡಿದರೂ ಕಾದಿದೆ ಶಿಕ್ಷೆ.

ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ನಡೆದ ಅಹಿತಕರ ಘಟನೆ ಬಳಿಕ ಗಲಭೆ ಪ್ರಚೋದನೆ ಸಹಿತ ಘಟನೆಗೆ ತುಪ್ಪ ಸುರಿಯುವ ವಿಘ್ನಸಂತೋಷಿಗಳ ದುಷ್ಕೃತ್ಯಕ್ಕೆ ಕಡಿವಾಣ ಹಾಕಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸಜ್ಜಾಗಿದೆ. ಅಂಥದ್ದೇನಾದರೂ ಕಂಡುಬಂದರೆ ನನಗೆ ತಿಳಿಸಿ ಎಂದು ಖುದ್ದು ಎಸ್ಪಿ ಭೂಷಣ್ ಜಿ. ಬೊರಸೆ ಕಲ್ಲಡ್ಕದಲ್ಲಿ ಶುಕ್ರವಾರ ನಡೆದ ಶಾಂತಿಸಭೆಯಲ್ಲೂ ತಿಳಿಸಿದ್ದಾರೆ.

ಏನು ಹೇಳಿದ್ದಾರೆ ಎಸ್ಪಿ:

ಜಾಹೀರಾತು

ಕಲ್ಲಡ್ಕದಲ್ಲಿ ನಡೆದ ಘಟನೆಗಳ ವಿಚಾರದಲ್ಲಿ ಇಲ್ಲಿಯವರೆಗೆ ಒಟ್ಟು 10 ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ತನಿಖೆಗೆ ಎರಡೂ ಕೋಮಿನ ಜನರು ಸಹಕರಿಸುತ್ತಿದ್ದಾರೆ. ಆದರೆ ಕೆಲವು ಸಮಾಜಘಾತುಕ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಡುತ್ತಿದ್ದಾರೆ. ಇಂಥ ಸಂದೇಶಗಳನ್ನು ದಯವಿಟ್ಟು ಫಾರ್ವಾರ್ಡ್ ಮಾಡಬೇಡಿ. ಫಾರ್ವಾರ್ಡ್ ಮಾಡಿದಲ್ಲಿ, ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ರೀತಿಯ ಸಂದೇಶಗಳನ್ನು ಸ್ಕ್ರೀನ್ ಶಾಟ್ ಫೊಟೋ ತೆಗೆದು 9480800941 ಅಥವಾ 9480805300 ನಂಬ್ರಕ್ಕೆ ಕಳುಹಿಸಿ. ನಿಮ್ಮ ಮಾಹಿತಿಯನ್ನು ಗುಪ್ತವಾಗಿಡಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ನಮ್ಮ ಜೊತೆ ಸಹಕರಿಸಿ ಎಂದು ಎಸ್ಪಿ ಮನವಿ ಮಾಡಿದ್ದಾರೆ.

ಇಬ್ಬರ ಮೇಲೂ ಹಲವು ಪ್ರಕರಣ:

ಕಲ್ಲಡ್ಕದಲ್ಲಿ ಜೂನ್ 13ರಂದು ಇಬ್ರಾಹಿಂ ಖಲೀಲ್ ಮತ್ತು ರತ್ನಾಕರ ಶೆಟ್ಟಿ ಮಧ್ಯೆ ಘರ್ಷಣೆ ನಡೆದಿದ್ದು, ನಂತರ ಅಲ್ಲಿ ಕಲ್ಲು ತೂರಾಟ ಆಗಿದೆ. ಇಬ್ರಾಹಿಂ ಖಲೀಲ್ ಮೇಲೆ 2014ರಿಂದ ಇಲ್ಲಿಯವರೆಗೆ ಒಟ್ಟು 8 ಪ್ರಕರಣಗಳು ಮತ್ತು ರತ್ನಾಕರ ಶೆಟ್ಟಿ ಮೇಲೆ 2003ರಿಂದ ಇಲ್ಲಿಯವರೆಗೆ 9 ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಜಾಹೀರಾತು

ಶಾಂತಿಸಭೆಯ ಮುಖ್ಯಾಂಶಗಳು ಇವು

ಕಲ್ಲಡ್ಕ ಈಗ ಸಹಜ ಸ್ಥಿತಿಗೆ ಮರಳಿದೆ. ವಾಹನ ಸಂಚಾರ ಎಂದಿನಂತೆಯೇ ಇದೆ. ನಿಧಾನವಾಗಿ ವ್ಯಾಪಾರ ವಹಿವಾಟುಗಳೂ ಚೇತರಿಕೆ ಕಾಣುತ್ತಿವೆ. ಈ ಮಧ್ಯೆ ಶುಕ್ರವಾರ ಸಂಜೆ ಕಲ್ಲಡ್ಕ ಶಾಲೆಯಲ್ಲಿ ಶಾಂತಿಸಭೆ ನಡೆಯಿತು. ಈ ಸಂದರ್ಭ ಕಲ್ಲಡ್ಕ ಡಾ. ಪ್ರಭಾಕರ ಭಟ್, ಅಬುಬಕ್ಕರ್ ಸಿದ್ದೀಕ್, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮತ್ತು ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಇದಿನಬ್ಬ, ಪದ್ಮನಾಭ ರೈ,ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಕೃಷ್ಣಪ್ಪ ಪೂಜಾರಿ ಉದ್ಯಮಿ ಹನೀಫ್ ಅಹಮ್ಮದ್, ಪಂಚಾಯತ್ ಸದಸ್ಯ ಗೋಪಾಲ ಪೂಜಾರಿ, ಶೆರೀಫ್, ಆಯಿಷಾ ಮತ್ತು ಶಾಫಿ ಮಾತನಾಡಿ ವಿವಿಧ ವಿಷಯಗಳ ಕುರಿತು ಗಮನ ಸೆಳೆದರು. ಮಾತನಾಡಿದವರೆಲ್ಲರೂ ಅಮಾಯಕರ ಬಂಧನವಾಗಿದೆ ಎಂದು ಗಮನ ಸೆಳೆದರು.

ಜಾಹೀರಾತು

ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್:

ಬೆರಳೆಣಿಕೆಷ್ಟು ಜನರಿಂದಾಗಿ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ. ಯಾವುದೇ ಅಹಿತಕರ ಘಟನೆಗಳಾದ ತಕ್ಷಣ ಎರಡೂ ಸಮುದಾಯದ ಮುಖಂಡರು ಅಥವಾ ಹಿರಿಯರು ಸೇರಿಕೊಂಡು ಪರಿಸ್ಥಿತಿ ಉಲ್ಬಣವಾಗದಂತೆ ಪ್ರಯತ್ನಿಸಬೇಕು . ಘಟನೆ ನಡೆದ ಕೂಡಲೇ ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕುವುದು, ಗಡುವು ನೀಡುವುದರಿಂದ ಅಮಾಯಕ ಬಂಧನವಾಗುವ ಸಾಧ್ಯತೆಗಳಿರುತ್ತದೆ. ಹಾಗಾಗಿ ತನಿಖೆ ನಡೆಸಿ ನೈಜ್ಯ ಆರೋಪಿಗಳನ್ನು ಬಂಧಿಸುವವರೆ ತಾಳ್ಮೆ ವಹಿಸಬೇಕಾಗುತ್ತದೆ  ಘಟನೆಯ ಸಂದರ್ಭಗಳಲ್ಲಿ ಇಲಾಖಾ ವತಿಯಿಂದ ಲೋಪಗಳು ಆಗಿದ್ದಲ್ಲಿ ಮುಂದಿನ ದಿನಗಳಲ್ಲಿ ಅವುಗಳನ್ನು ಸರಿಪಡಿಸಲಾಗುವುದು.

ಎಸ್ಪಿ ಭೂಷಣ್ ಜಿ.ಬೊರಸೆ:

ಜಾಹೀರಾತು

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಸೃಷ್ಟಿಸುವುದು ಮತ್ತು ಅದನ್ನು ಬೇರೆಯವರಿಗೆ ರವಾನಿಸುವುದು ಕೂಡಾ ಕಾನೂನಿನಲ್ಲಿ ಅಪರಾಧವಾಗಿದೆ. ಇದಕ್ಕೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ. ಕಲ್ಲಡ್ಕದಲ್ಲಿ ಈಗಿರುವ ಔಟ್ ಪೋಸ್ಟ್ ಜಾಗವನ್ನು ಅಹಿತಕರ ಘಟನೆಗಳು ಸಂಭವಿಸುವ ಪ್ರದೇಶಕ್ಕೆ ಸ್ಥಳಾಂತರಿಸಲಾಗುವುದು. ಗಾಂಜಾ ನಿರ್ಮೂಲನೆ ಕಲ್ಲಡ್ಕದಲ್ಲಿ ಶೇ.100ರಷ್ಟು ಆಗಬೇಕು. ಅದನ್ನು ಸೇವಿಸುವವರ ಮೇಲೆ ಕಠಿಣ ಸೆಕ್ಷನ್ ಗಳನ್ನು ಹಾಕಿ ಶಿಕ್ಷಿಸಲು ಕ್ರಮ ಕೈಗೊಳ್ಳಲಾಗುವುದು . ಇನ್ನು ಮುಂದೆ ತನಿಖಾ ಕಾರ್ಯಾಚರಣೆ ನಡೆಸುವಾಗ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಲಾಗುವುದು. ಆರೋಪಿಗಳ ಭಾವಚಿತ್ರದೊಂದಿಗೆ ಅವರು ಆರೋಪಿಗಳು ಎಂದು ಖಚಿತಪಡಿಸಿಕೊಂಡ ಬಳಿಕ ಬಂಧಿಸಲಾಗುವುದು ಪೊಲೀಸ್ ದೌರ್ಜನ್ಯ ಕುರಿತು ಗಮನಹರಿಸಲಾಗುವುದು. ಅಂಗಡಿ ಮುಂಗಟ್ಟುಗಳ ದೈನಂದಿನ ವ್ಯವಹಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಯಾರಿಗೆ ಸಾಧ್ಯವೋ ಅವರೆಲ್ಲ ಸಿಸಿ ಕ್ಯಾಮರಾ ಹಾಕಿ ಮತ್ತು ಅದು ಸರಿಯಾದ ಜಾಗದಲ್ಲಿ ಇರುವಂತೆ ನೋಡಿಕೊಳ್ಳಿ

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಪ್ರಚೋದನಕಾರಿ ಮೆಸೇಜ್ ಫಾರ್ವಾರ್ಡ್ ಮಾಡಿದರೆ ಕಾದಿದೆ ಶಿಕ್ಷೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*