ಮಂಗ್ಲಿಮಾರ್‌ನಲ್ಲಿ ಮಾರ್ಚ್ 1ರಿಂದ ಬ್ರಹ್ಮಕಲಶೋತ್ಸವ

ಶಿಥಿಲಗೊಂಡಿದ್ದ ಅಮ್ಟಾಡಿ ಗ್ರಾಮದ ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ, ದೂಮಾವತಿ ಬಂಟ ಹಾಗೂ ಪರಿವಾರ ದೈವಗಳ ನೂತನವಾಗಿ ಪುನರ್‌ನಿರ್ಮಾಣಗೊಂಡಿರುವ ದೈವಸ್ಥಾನದ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾರ್ಚ್ 1ರಿಂದ 5ರ ತನಕ ನಡೆಯಲಿದೆ ಹಾಗೂ ಕಲಾಯಿ ಶ್ರೀ ಮಹಮ್ಮಾಯಿ, ಅಶ್ವಥನಾರಾಯಣ ನಾಗದೇವರು ಮಾರಿಯಮ್ಮ ಪರಿವಾರ ದೈವಗಳ ದೇವಸ್ಥಾನ ಅಮ್ಟಾಡಿಯಲ್ಲಿ ಕಲಾಯಿ ಮಹಮ್ಮಾಯಿ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆಬ್ರವರಿ ೨೭ರಿಂದ ಮಾರ್ಚ್ ೧ರವರೆಗೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ರವಿಶಂಕರ್ ಶೆಟ್ಟಿ ಬಡಾಜೆ ತಿಳಿಸಿದರು.

ಮಂಗ್ಲಿಮಾರ್ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಹಿಂದೆ ಇದ್ದ ದೈವಸ್ಥಾನವನ್ನು ಕೆಡವಿ ಈಗ ಅಮ್ಟಾಡಿ ಗ್ರಾಮಸ್ಥರಿಗೆ ಶಾಶ್ವತವಾದ ದೈವಸ್ಥಾನ ನಿರ್ಮಾಣವಾಗಿದೆ. ಎಲ್ಲಾ ದರ್ಮದವರ ಸಹಕಾರದಿಂದ ಈ ದೈವಸ್ಥಾನ ನಿರ್ಮಾಣವಾಗಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಬ್ರಹ್ಮಲಶೋತ್ಸವ ನಡೆಯಲಿದೆ ಎಂದು ತಿಳಿಸಿದರು.

ವೈಭವದ ಹೊರೆಕಾಣಿಕೆ ಮೆರವಣಿಗೆ : ಹೊರೆಕಾಣಿಕೆ ಮೆರವಣಿಗೆಯು ಮಾರ್ಚ್ 2ರಂದು ಮಧ್ಯಾಹ್ನ ಗಂಟೆ 2ಕ್ಕೆ ಬಿ.ಸಿ.ರೋಡು ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಹೊರಟು ಕೈಕಂಬ ಪೊಳಲಿ ದ್ವಾರದ ಮೂಲಕ ಮಂಗ್ಲಿಮಾರ್ ದೈವಸ್ಥಾನಕ್ಕೆ ಬರಲಿರುವುದು ಹಾಗೂ ಮಾರ್ಚ್ ೪ರಂದು ಬೆಳಿಗ್ಗೆ 10ಕ್ಕೆ ಬಡಾಜೆಗುತ್ತುವಿನಿಂದ ದೈವಗಳ ಭಂಡಾರವು ಮಂಗ್ಲಿಮಾರ್ ದೈವಸ್ಥಾನಕ್ಕೆ ಆಗಮಿಸುವುದು ಹಾಗೂ ಅದೇ ದಿನ ಸಂಜೆ 4ಕ್ಕೆ ನಲ್ಕೆಮಾರ್ ದ್ವಾರದಿಂದ ಪೂಜ್ಯಶ್ರೀ ಡಾ. ವೀರೇಂದ್ರ ಹೆಗ್ಗಡೆಯವರು ಕೀಲುಕುದುರೆ, ಬ್ಯಾಂಡ್ ವಾದ್ಯ ಹಾಗೂ ಪೂರ್ಣಕುಂಭದ ಸ್ವಾಗತದೊಂದಿಗೆ ಮಂಗ್ಲಿಮಾರ್‌ಗೆ ಮೆರವಣಿಗೆ ಮೂಲಕ ಆಗಮಿಸಿ  ಭಂಡಾರದ ಮನೆಯ ದೀಪ ಪ್ರಜ್ವಲನ ಮಾಡಿ ಆಶೀರ್ವಚನ ನೀಡಲಿದ್ದಾರೆ.

ಜಾಹೀರಾತು

ಪತ್ರಿಕಾಗೋಷ್ಠಿಯಲ್ಲಿ ಬಡಾಜೆ ಗುತ್ತಿನವರು, ಎಲೆದಾರ ಬಾವದವರು, ತಡ್ಯಾಲ ಗುತ್ತಿನವರು, ಕೈಯೋಳಿಮಾರ್ ಗುತ್ತಿನವರು, ಉಸ್ತುವಾರಿ ಸಮಿತಿಯ ಪದಾಧಿಕಾರಿಗಳಾದ ಭುವನೇಶ್ ಪಚ್ಚಿನಡ್ಕ, ನರಸಿಂಹ ಹೊಳ್ಳ, ರಾಮಚಂದ್ರ ಕಾಯರ್‌ಮಾರ್, ಸಚ್ಚಿದಾನಂದ ಶೆಟ್ಟಿ ಬಡಾಜೆ, ಪುಷ್ಪರಾಜ್ ಶೆಟ್ಟಿ ಬಡಾಜೆ, ಪ್ರಶಾಂತ್ ಬಡಾಜೆ, ಪಿ. ಕೇಶವ ನಾಕ್, ಬಸಂತ ಕುಮರ್ ಕಾಯರ್‌ಮಾರ್, ಉಮೇಶ್ ಶೆಟ್ಟಿ ಬಟ್ಟತ್ತೋಡಿ, ವಿಶ್ವನಾಥ ಕಲಾಯಿ, ರಾಜಾರಾಮ ಶೆಟ್ಟಿ ಬಡಾಜೆ, ಹರಿಶ್ಚಂದ್ರ ಶೆಟ್ಟಿ ಅಜೆಕಲ, ಮೋಹನ್ ಶೆಟ್ಟಿ ಬಡಾಜೆ, ನೇತ್ರಾನಂದ ಶೆಟ್ಟಿ ಬಟ್ಟತ್ತೋಡಿ, ಕೃಷ್ಣಪ್ಪ ಕಲಾಯಿ, ಪ್ರಭಾಕರ ಆಳ್ವ ಬಡಾಜೆ, ಜಯಾನಂದ ಕೋಟ್ಯಾನ್, ಚಂದ್ರಶೇಖರ ಶೆಟ್ಟಿ ಎಂರ್ಬುಡೆ, ಲಕ್ಷ್ಮಣ ಶೆಟ್ಟಿ ಬಟ್ಟತ್ತೋಡಿ, ಜಗದೀಶ್ ಕುಂದರ್ ಹಾಗೂ ಮಹಿಳಾ ಸಮಿತಿಯ ರೇವತಿ ಉಪಸ್ಥಿತರಿದ್ದರು.ತಾರನಾಥ ಕಾಯರ್‌ಮಾರ್ ಸ್ವಾಗತಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮಂಗ್ಲಿಮಾರ್‌ನಲ್ಲಿ ಮಾರ್ಚ್ 1ರಿಂದ ಬ್ರಹ್ಮಕಲಶೋತ್ಸವ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*