ವಿಟ್ಲ: ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಮಾರ್ಗದರ್ಶನದೊಂದಿಗೆ ಗ್ರಾಮ ರಾಜ್ಯವೆಂಬ ಯೋಜನೆ ಜಾರಿಗೆ ಬಂದಿದ್ದು, ಅದಕ್ಕೆ ಪೂರಕವಾದ ಮತ್ತೊಂದು ಯೋಜನೆ ಗ್ರಾಮೋದಯ ಎಂಬ ವಿಶಿಷ್ಟ ಕಲ್ಪನೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದಾರೆ.
ಇದನ್ನು ಅನುಷ್ಠಾನಗೊಳಿಸುವ ಸಲುವಾಗಿ ಮಂಗಳೂರು ಹವ್ಯಕ ಮಂಡಲದ ಕೇಪು ಹವ್ಯಕ ವಲಯದ ವ್ಯಾಪ್ತಿಯ ಮುಳಿಯ ಶಾಲೆಯಲ್ಲಿ ವಿಶೇಷ ಮಾಹಿತಿ ಶಿಬಿರವನ್ನು ನ.13ರಂದು ಅಪರಾಹ್ನ 2.30ಕ್ಕೆ ಆಯೋಜಿಸಲಾಗಿದೆ. ಆದುದರಿಂದ ಸ್ಥಳೀಯ ವ್ಯಾಪ್ತಿಯ ಕೇಪು, ವಿಟ್ಲ, ಕಲ್ಲಡ್ಕ, ಕನ್ಯಾನ, ಬಾಯಾರು, ಕೋಳ್ಯೂರು ಮತ್ತು ಮುಡಿಪು ವಲಯಗಳ ಆಸಕ್ತರು ಭಾಗವಹಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ನ.13ರಂದು ಮುಳಿಯದಲ್ಲಿ ಗ್ರಾಮೋದಯ ಸಭೆ"