ಅಂದು ಕಸದ ಕೊಂಪೆ, ಇಂದು ಜನರ ಉಪಯೋಗಕ್ಕೆ

www.bantwalnews.comಸಂಪಾದಕ: ಹರೀಶ ಮಾಂಬಾಡಿ

ಹದಿನೈದು ದಿನಗಳ ಹಿಂದೆ ಕಸದ ಕೊಂಪೆಯಾಗಿದ್ದು ಬೀಳುವ ಸ್ಥಿತಿಯಲ್ಲಿದ್ದ ಪುರಸಭೆಯ ಬಂಟ್ವಾಳ ಬಡ್ಡಕಟ್ಟೆ ಬಸ್ ತಂಗುದಾಣಕ್ಕೀಗ ಜೀವಕಳೆ ಬಂದಿದೆ. ಬಸ್ಸುಗಳು ತಂಗುದಾಣದ ಎದುರೇ ಬಂದು ನಿಲ್ಲುತ್ತಿದ್ದು, ಪ್ರಯಾಣಿಕರು ಅಲ್ಲಿಯೇ ಹತ್ತುವಷ್ಟರ ಮಟ್ಟಿಗೆ ಈ ಭಾಗ ಬಸ್ ಮತ್ತು ಪ್ರಯಾಣಿಕರ ಉಪಯೋಗಕ್ಕೆ ಲಭಿಸಿದೆ.

ಜಾಹೀರಾತು

ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಬಡ್ಡಕಟ್ಟೆಯಲ್ಲಿ ನಡೆಸಿದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಜೇಸಿ ಬಂಟ್ವಾಳ ಮತ್ತು ರೋಟರಿ ಕ್ಲಬ್ ಬಂಟ್ವಾಳ ತಂಡದ ಸದಸ್ಯರಿಗೆ ಶಿಥಿಲಗೊಂಡು ಕಸದ ಕೊಂಪೆಯಂತಿದ್ದ ಬಸ್ ತಂಗುದಾಣ ಕಂಡುಬಂದಿತ್ತು. ಅದನ್ನು ಸ್ವಚ್ಛಗೊಳಿಸಿದ ಬಳಿಕ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಅವರು ಇಡೀ ಬಸ್ ತಂಗುದಾಣಕ್ಕೆ ಹೊಸರೂಪವನ್ನು ರೋಟರಿ ಸುವರ್ಣ ವರ್ಷಾಚರಣೆ ಹಿನ್ನೆಲೆಯಲ್ಲಿ ಜೇಸಿ ಬಂಟ್ವಾಳ ಮತ್ತು ಕಾರ್ಯನಿರತ ಪತ್ರಕರ್ತರ ಸಹಯೋಗದಲ್ಲಿ ಒದಗಿಸುವ ಪ್ರಸ್ತಾಪವನ್ನು ಪುರಸಭೆಗೆ ನೀಡಿದ ಫಲವಾಗಿ ಹೊಸ ರೂಪವನ್ನು ತಂಗುದಾಣ ಪಡೆಯಿತು.

ಜಾಹೀರಾತು

ಇದೀ ನವೀಕೃತಗೊಂಡು ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅವರಿಂದ ಉದ್ಘಾಟನೆಗೊಂಡಿರುವ ಬಂಟ್ವಾಳ ಬಡ್ಡಕಟ್ಟೆಯ ಪ್ರಯಾಣಿಕರ ತಂಗುದಾಣದತ್ತ ಜನರು ಚಿತ್ತ ಹರಿಸಿದ್ದಾರೆ.

ಸ್ವಚ್ಛ ಭಾರತ ಯೋಜನೆಯನ್ನು ಪ್ರಧಾನ ಮಂತ್ರಿಯವರು ಘೋಷಿಸಿದ್ದರೂ ಪ್ರಧಾನಿ ಅಥವಾ ಜನಪ್ರತಿನಿಧಿಗಳಿಂದ ಮಾತ್ರ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಸಂಘ ಸಂಸ್ಥೆಗಳು ಹಾಗೂ ಪ್ರತಿಯೊಬ್ಬ ಜನರೂ ಇದರಲ್ಲಿ ಕೈ ಜೋಡಿಸಿದಾಗ ದೇಶವನ್ನು ಸಂಪೂರ್ಣ ಸ್ವಚ್ಛತೆಯತ್ತ ಕೊಂಡೊಯ್ಯಲು ಸಾಧ್ಯವಿದೆ ಎಂದು ಉದ್ಘಾಟನೆ ಸಂದರ್ಭ ಶಾಸಕರು ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಮತ್ತು ಜೇಸಿಯ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದ್ದರು.

ಇದೀಗ ಬಸ್ಸುಗಳು ಬಸ್ ತಂಗುದಾಣದತ್ತ ಬರುತ್ತಿವೆ. ಸ್ಥಳೀಯ ಫನ್ ಟೈಮ್ ಹೋಟೆಲ್ ವತಿಯಿಂದ ತಂಗುದಾಣದಲ್ಲಿ ಕಸದ ತೊಟ್ಟಿ ಇದ್ದು, ಬಳಕೆಯಾಗುತ್ತಿದೆ. ಕಸ ಎಸೆಯದಂತೆ ಸ್ಥಳೀಯರು ಸಾರ್ವಜನಿಕರನ್ನು ಎಚ್ಚರಿಸುವಷ್ಟರ ಮಟ್ಟಿಗೆ ಪರಿಣಾಮ ಬೀರಿದೆ. ತಂಗುದಾಣದ ಎದುರೇ ಬಸ್ ಬರುವ ಕಾರಣ ಪ್ರಯಾಣಿಕರೂ ಬಸ್ ತಂಗುದಾಣವನ್ನು ಬಳಕೆ ಮಾಡುತ್ತಿದ್ದಾರೆ.

ಜಾಹೀರಾತು

ಬಸ್ ನಿಲ್ದಾಣದಲ್ಲೀಗ ವರ್ಲಿ ಚಿತ್ತಾರ… ರೊಟೇರಿಯನ್ ಗಳಾದ ಮಂಜುನಾಥ ಆಚಾರ್ಯ, , ಜಯಪ್ರಕಾಶ್, ವಲ್ಲಭೇಶ ಶೆಣೈ, ಭೂಮಿಕಾ ಶೆಣೈ, ಮೇಘಾ ಆಚಾರ್ಯ, ವಿದ್ಯಾ ಅಶ್ವನಿ ರೈ, ಡಾ. ಶಶಿಕಲಾ ಸೋಮಯಾಜಿ ಮತ್ತು ಪತ್ರಕರ್ತರಾದ ಸಂದೀಪ್ ಸಾಲ್ಯಾನ್ ವರ್ಲಿ ಚಿತ್ರ ರಚನೆಯಲ್ಲಿ ಕೈಜೋಡಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಅಂದು ಕಸದ ಕೊಂಪೆ, ಇಂದು ಜನರ ಉಪಯೋಗಕ್ಕೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*