www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ಪೇಟೆ ಸಹಿತ ನೇತ್ರಾವತಿ ಹರಿಯುವ ನದಿಯ ಪಕ್ಕದಲ್ಲೆಲ್ಲ ಗುರುವಾರ ಪ್ರವಾಹದ ಸ್ಥಿತಿ. ನದಿ ನೀರು ರಸ್ತೆ, ಮನೆಯಂಗಳಕ್ಕೆ ಬಂದರೆ ಹೋಗುವುದಾದರೂ ಎಲ್ಲಿಗೆ ಎಂಬ ಚಿಂತೆ ನದಿ ಪಕ್ಕದ ಜನರದ್ದು. ಬಂಟ್ವಾಳಲ್ಲಿ ಈ ಹಿಂದೆ ಧಾರಾಕಾರ ಮಳೆ ಬಂದು ಪ್ರವಾಹ ಬರುತ್ತಿತ್ತು. ಈಗ ಡ್ಯಾಂ ನಲ್ಲಿ ನೀರು ಬಿಡುವಂಥ ಪರಿಸ್ಥಿತಿ ಉದ್ಭವವಾದ ಕೂಡಲೇ ಪ್ರವಾಹ ಬರುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಏಕೆಂದರೆ ನೇತ್ರಾವತಿ ಹುಟ್ಟಿದಲ್ಲಿಂದ ಸಮುದ್ರ ಸೇರುವವರೆಗೆ ಡ್ಯಾಮುಗಳದ್ದೇ ತಡೆ. ನದಿಯೂ ಅದರಷ್ಟಕ್ಕೆ ಹರಿಯುವುದಿಲ್ಲ, ನದಿ ಹರಿಯುವ ಜಾಗಗಳ ಪಕ್ಕದಲ್ಲೆ ಅವಕಾಶ ಸಿಕ್ಕಲ್ಲೆಲ್ಲ ಜನರೂ ಖಾಲಿ ಜಾಗ ಬಿಡೋದಿಲ್ಲ. ಹೀಗೆ ನದಿ ನೀರು ಜಾಗ ಸಿಕ್ಕಲ್ಲೆಲ್ಲ ನುಗ್ಗಿಬಿಡುತ್ತದೆ. ಗುರುವಾರ ಬಂಟ್ವಾಳ, ಪಾಣೆಮಂಗಳೂರು ಪರಿಸರದ ಪರಿಸ್ಥಿತಿಯನ್ನು ಛಾಯಾಚಿತ್ರಗಳಲ್ಲೇ ನೋಡುವ ಬನ್ನಿ.
ಜಾಹೀರಾತು
Photo Credit: Kishore Peraje and Deepak Salian
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ನೀರು ರಸ್ತೆ, ಮನೆಯಂಗಳಕ್ಕೆ ಬಂದರೆ ಹೋಗುವುದಾದರೂ ಎಲ್ಲಿಗೆ?"