ಮಂಗಳೂರು ಮತ್ತೊಂದು ಚೆನ್ನೈ ಆಗದಿರಲಿ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ಅತ್ತಾವರದ ಆಸ್ಪತ್ರೆಗೆ ವಾಹನದಲ್ಲಿ ತೆರಳುವಾಗ ಜಾಗ್ರತೆ, ಅಲ್ಲಿ ಪಾರ್ಕಿಂಗ್ ಜಾಗವಿಡೀ ಮುಳುಗಿದೆ. ಸಣ್ಣ ರಸ್ತೆಗಳ ಚರಂಡಿಗಳು ಯಾವುದು, ರಸ್ತೆ ಯಾವುದು ಗೊತ್ತಾಗುವುದಿಲ್ಲ. ನೀರು ತೋಡಿನಲ್ಲಿ ಹರಿದಂತೆ ಕಾಣಿಸುತ್ತಿದೆ.

ಮಂಗಳೂರಿಗೆ ಏನಾದರೂ ಅಗತ್ಯವಿದ್ದರೆ ಮಾತ್ರ ಇವತ್ತು ಬನ್ನಿ. ಪಡೀಲ್ ಅಂಡರ್ ಪಾಸ್ ಸಮುದ್ರದಂತಾಗಿದೆ. ವಾಹನ ಸಂಚಾರ ಸ್ಥಗಿತಗೊಂಡಿದೆ. ಕೆಲವೊಂದು ವಾಹನಗಳು ಬಂದ್ ಬಿದ್ದಿವೆ. ಚಲಾಯಿಸಲೂ ಆಗದಂಥ ಸ್ಥಿತಿ.

ಮಂಗಳೂರಿನ ಟಿಎಂಎ ಪೈ ಹಾಲ್ ಪಕ್ಕದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಎಚ್ಚರ, ದೊಡ್ಡ ತೋಡು ಉಕ್ಕಿ ಹರಿದಿದೆ. ನೀರು ಹೊಳೆಯಂತೆ ರಸ್ತೆಯಲ್ಲಿದೆ. ಸಣ್ಣ ಮಕ್ಕಳನ್ನು ಕರೆದುಕೊಂಡು ಹೋಗುವುದು ಬಿಡಿ, ದೊಡ್ಡವರಿಗೂ ನಡೆಯಲು ಕಷ್ಟ!!!

ಜಾಹೀರಾತು

ಮಂಗಳವಾರ ಮಧ್ಯಾಹ್ನವಾಗುತ್ತಿದ್ದಂತೆ ವಾಟ್ಸಾಪ್, ಫೇಸ್ ಬುಕ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಸಂದೇಶಗಳು, ಹೊಳೆಯಂತಾಗಿರುವ ಮಂಗಳೂರಿನ ರಸ್ತೆಗಳು, ವಿಡಿಯೋಗಳು ಹರಿದಾಡುತ್ತಿವೆ. ಹಾಗೆ ನೋಡಿದರೆ ಮಂಗಳೂರಿನಲ್ಲಿ ಇಂಥದ್ದೊಂದು ಸ್ಥಿತಿ ನಿರ್ಮಾಣವಾಗುತ್ತದೆ ಎಂಬುದನ್ನು ಸಾಮಾಜಿಕ ಕಳಕಳಿ ಇರುವ ಹೋರಾಟಗಾರರು, ಜಾಗೃತ ನಾಗರಿಕರು ಎಚ್ಚರಿಸುತ್ತಲೇ ಬಂದಿದ್ದರು.

ಚರಂಡಿಗಳು ಹೂಳೆತ್ತದೇ ಇರುವುದು, ಸಮುದ್ರಕ್ಕೆ ನೀರು ಹೋಗದೇ ಇರುವುದು, ಕಂಡಕಂಡಲ್ಲಿ ಕಟ್ಟಡಗಳು ಏಳುತ್ತಿರುವುದು, ವೈಜ್ಞಾನಿಕವಾಗಿ ರಸ್ತೆಗಳನ್ನು ನಿರ್ಮಿಸದೇ ಇರುವುದು  ಕೃತಕ ನೆರೆ ಉದ್ಭವವಾಗಲು ಹೀಗೆ ನೂರೆಂಟು ಕಾರಣಗಳನ್ನು ನೀಡಲಾಗುತ್ತಿದೆ.

ಜಾಹೀರಾತು

2015ನೇ ಇಸವಿಯಲ್ಲಿ ಭಾರತದ ಮಹಾನಗರಗಳಲ್ಲಿ ಒಂದಾದ ಚೆನ್ನೈನಲ್ಲಿ ಭಾರಿ ಪ್ರಮಾಣದ ಪ್ರವಾಹ, ಕೃತಕ ನೆರೆ ಉಂಟಾಗಿ ಹಲವು ಪ್ರಾಣಾಪಾಯಗಳಿಗೂ ಕಾರಣವಾಗಿತ್ತು. ಇದೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯೂ ಆಗಿತ್ತು.

ಚೆನ್ನೈ ರೀತಿಯಲ್ಲಿ ಅಡ್ಡಡ್ಡವಾಗಿ ಬೆಳೆಯುತ್ತಿರುವ ಮಂಗಳೂರು ಕೂಡ ಇಂಥದ್ದೇ ಒಂದು ಸಮಸ್ಯೆಗೀಡಾಗುವ ಅಪಾಯಕ್ಕೆ ಮೈಯೊಡ್ಡಿದೆ. ಮಂಗಳೂರಿನಲ್ಲಿ ನೀರು ಭೂಮಿಯೊಳಗೆ ಇಂಗಲು ಕಾಂಕ್ರೀಟ್ ಅಡ್ಡಿಯಾಗುತ್ತಿದೆ. ನೀರು ಹರಿದುಹೋಗಲು ಯಾವುದೇ ವ್ಯವಸ್ಥೆಗಳು ಇಲ್ಲ. ಸಮುದ್ರ ಪಕ್ಕದಲ್ಲಿದ್ದರೂ ಮಳೆನೀರು ಸಮುದ್ರಕ್ಕೂ ಸೇರೋದಿಲ್ಲ, ಭೂಮಿಯೊಳಗೂ ಹೋಗೋದಿಲ್ಲ ಎಂದಾದ ಮೇಲೆ ಏನು ಮಾಡುವುದು?

ಜಾಹೀರಾತು

ಜಾತಿ, ಜಾತಿಗಳ ನಡುವೆ ಜಗಳ, ಧರ್ಮ, ಧರ್ಮಗಳ ನಡುವೆ ಒಡಕು ಮೂಡಿಸುವ ಸಂದೇಶಗಳು, ರಾಜಕೀಯ ಪಕ್ಷಗಳ ಭಿನ್ನ ಸಿದ್ಧಾಂತಗಳನ್ನು ಲೇವಡಿ ಮಾಡುವ ಸಂದೇಶಗಳನ್ನು ಹರಡುವ ಜನರು ಅರ್ಥ ಮಾಡಿಕೊಳ್ಳಬೇಕಾದ ವಿಷಯವೆಂದರೆ, ಇಂಥ ಸನ್ನಿವೇಶಗಳು ಎದುರಾದಾಗ ಏನು ಮಾಡುವುದು ಹಾಗೂ ಇಂಥ ಸನ್ನಿವೇಶಗಳು ಬಾರದಂತೆ ಹೇಗೆ ಜಾಗರೂಕತೆ ವಹಿಸುವುದು?

ಆದರೆ ದುರದೃಷ್ಟವಶಾತ್ ಇಷ್ಟೊಂದು ಭಾರಿ ಮಳೆಗೆ ಕೃತಕ ನೆರೆಯಿಂದಾಗಿ ತೊಂದರೆಗಳು ಆಗುತ್ತಿದ್ದರೂ ಕೆಲವರು ಮೊಬೈಲ್ ನಲ್ಲಿ ಫೊಟೋ ಕ್ಲಿಕ್ಕಿಸಿ ಆಡಳಿತವನ್ನೋ, ತಮಗಾಗದವರು ಇದಕ್ಕೆ ಹೊಣೆಗಾರರು ಎಂಬುದಾಗಿ ದೂರುತ್ತಿದ್ದಾರೆ. ಸ್ವಯಂಸೇವಾ ಸಂಸ್ಥೆಗಳು ಈಗ ಸ್ಟೇಜ್ ಕಾರ್ಯಕ್ರಮಗಳಿಂದ ಹೊರಬಂದು, ಜನರ ಕಷ್ಟಗಳಿಗೆ ಸ್ಪಂದಿಸಲು ಈಗ ಸಕಾಲ.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮಂಗಳೂರು ಮತ್ತೊಂದು ಚೆನ್ನೈ ಆಗದಿರಲಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*