ವ್ಯಕ್ತಿತ್ವ ವಿಕಸನ ತರಬೇತಿ ಸಂಸ್ಥೆ ಜೋಡುಮಾರ್ಗ ನೇತ್ರಾವತಿ ಜೇಸೀ ಐ ವತಿಯಿಂದ ಜೇಸಿರೆಟ್ ವಿಭಾಗದ ಉದ್ಘಾಟನಾ ಸಮಾರಂಭ ಬಿ.ಸಿ.ರೋಡ್ ಪದ್ಮಾ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಜಾಹೀರಾತು
ಜೇಸಿರೆಟ್ ವಿಭಾಗದ ವಲಯ 15 ವಲಯ ಸಂಯೋಜಕಿ ರಮ್ಯಾ ರಾವ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಜೇಸೀ ಐ ಜೋಡುಮಾರ್ಗ ನೇತ್ರಾವತಿ ಯ ಜೇಸಿರೆಟ್ ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾದ ಗಾಯತ್ರಿ ಲೋಕೇಶ್ ಇವರಿಗೆ ಜೇಸೀ ಅಧ್ಯಕ್ಷ ರಾದ ಸವಿತಾ ನಿರ್ಮಲ್ ಪ್ರಮಾಣ ವಚನ ಭೋಧಿಸಿದರು. ಜೇಸಿರೆಟ್ ವಿಭಾಗದ ಕಾರ್ಯದರ್ಶಿಯಾಗಿ ಮನಿಷಾ ಜಯರಾಜ್ ನೇಮಕಗೊಂಡರು.
ಸಮಾರಂಭದಲ್ಲಿ ಜೇಸೀ ಮಂಗಳೂರು ಸಾಮ್ರಾಟ್ ಅಧ್ಯಕ್ಷ ರಾದ ಡಾ. ರಾಘವೇಂದ್ರ ಹೊಳ್ಳ ಶುಭ ಹಾರೈಸಿದರು. ಕಾರ್ಯದರ್ಶಿ ಹರ್ಷರಾಜ್ ವಂದಿಸಿದರು. ನವೀನ್ ಚಂದ್ರ ಶೆಟ್ಟಿ ಸ್ವಾಗತಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಜೋಡುಮಾರ್ಗ ನೇತ್ರಾವತಿಯ ಜೇಸಿರೆಟ್ ವಿಭಾಗ ಉದ್ಘಾಟನೆ"