ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಶುಕ್ರವಾರ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಮಾರುತಿ ಓಮ್ನಿ ವಾಹನಕ್ಕೆ ಬಸ್ ಡಿಕ್ಕಿಯಾಗಿ ಓಮ್ನಿ ಚಾಲಕ, ಉಪ್ಪಿನಂಗಡಿ ಸಮೀಪ ಕರಾಯ ನಿವಾಸಿ ಮೋಹನ (32) ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಜ್ಜುಗುಜ್ಜಾದ ವಾಹನ:
ರಸ್ತೆಯಲ್ಲಿ ಹಾವು ಸಂಚರಿಸುತ್ತಿದ್ದ ವೇಳೆ ಅದನ್ನು ತಪ್ಪಿಸುವ ಸಲುವಾಗಿ ಚಾಲಕರು ಯತ್ನಿಸಿದ ವೇಳೆ ಘಟನೆ ಸಂಭವಿಸಿದೆ.
ಓಮ್ನಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕೆಲವು ಬಿಡಿಭಾಗಗಳು ಬಸ್ಸಿನ ಚಕ್ರದಡಿಯಲ್ಲಿ ಸಿಲುಕಿದೆ. ಇತ್ತ ನಾಗರಹಾವಿನ ಕಳೇಬರವೂ ರಸ್ತೆ ಪಕ್ಕ ಕಂಡುಬಂತು. ಮೋಹನ (32) ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಂಭೀರ ಗಾಯಗೊಂಡ ಚಾಲಕನನ್ನು ಸ್ಥಳೀಯರು ಮಾಣಿಯ 108 ಆಂಬ್ಯುಲೆನ್ಸ್ ಮೂಲಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಸ್ತೆ ಅಗಲ ಸಂದರ್ಭ ಹಾವುಗಳ ಸಂಖ್ಯೆ ಇಲ್ಲಿ ಅಧಿಕವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಕಾಮಗಾರಿ ಸಂದರ್ಭ ಇಲ್ಲಿ ಸುತ್ತಮುತ್ತಲಿದ್ದ ಮರಗಳಿಗೆ ಕೊಡಲಿಯೇಟು ಬಿದ್ದಿದೆ. ಸಹಜವಾಗಿಯೇ ಇಲ್ಲಿದ್ದ ಉರಗಸಂತತಿ ಬೇರೆ ಜಾಗ ಹುಡುಕಿಕೊಂಡು ಸುತ್ತಮುತ್ತಲೆಲ್ಲಾ ತಿರುಗಾಡುತ್ತಿವೆ. ರಸ್ತೆ ಮಧ್ಯೆ ಹಾವುಗಳು ಈ ಹೆದ್ದಾರಿಗುಂಟ ಸಿಗುವುದು ಮಾಮೂಲಾಗಿ ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವಾಹನ ಸವಾರರೂ ಈ ಭಾಗದಲ್ಲಿ ಸಂಚರಿಸುವ ಸಂದರ್ಭ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
Be the first to comment on "ಹಾವು ಅಡ್ಡ ಬಂದು ಬ್ರೇಕ್: ಬಸ್-ಓಮ್ನಿ ಡಿಕ್ಕಿ, ಚಾಲಕ ಗಂಭೀರ"