ಗೋಧಿಯಲ್ಲಿದೆ ಅಧಿಕ ಶಕ್ತಿ

  • ಡಾ. ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ಗೋಧಿಯು ಅತ್ಯಂತ ಸತ್ವಭಾರಿತವಾದ ಒಂದು ಸಂಪೂರ್ಣ ಆಹಾರ ದ್ರವ್ಯವಾಗಿದೆ. ಗೋಧಿಯಲ್ಲಿ ಕಬ್ಬಿಣಾಂಶ, ಉಪ್ಪು, ಕ್ಯಾಲ್ಸಿಯಂ,ಪೊಟ್ಯಾಸಿಯಂ ಮೆಗ್ನೀಷಿಯಂ,ಜಿಂಕ್, ತಾಮ್ರ, ಗಂಧಕ, ಮ್ಯಾಂಗನೀಸ್, ವಿಟಮಿನ್ ಎ ,ಇ  ಇತ್ಯಾದಿ ಅಂಶಗಳು ಯಥೇಷ್ಟವಾಗಿ ಅಡಗಿದೆ. ಆದುದರಿಂದ ಇದು ಮಾನವನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯವಾದ ವಸ್ತುವಾಗಿದೆ.

ಜಾಹೀರಾತು
  1. ಗೋಧಿಯಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನ ಅಂಶ ಇರುವುದರಿಂದ ಹೃದಯಕ್ಕೆ ಇದು ಸ್ನೇಹಿಯಾಗಿದೆ .
  2. ಇದು ಶರೀರದಲ್ಲಿ ಅನಗತ್ಯವಾಗಿ ಶೇಖರವಾಗಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡಲು ಅನುಕೂಲಕಾರಿಯಾಗಿದೆ.
  3. ಇದು ಮಧುಮೇಹದ ರೋಗಿಗಳಿಗೆ ಉತ್ತಮ ಪಥ್ಯ ಆಹಾರ ಮತ್ತು ರೋಗವನ್ನು ಹತೋಟಿಯಲ್ಲಿ ಇಡಲು ಸಹ ಸಹಕರಿಸುತ್ತದೆ.
  4. ಗೋಧಿಯು ಗರ್ಭಿಣಿಯರಲ್ಲಿ ಸತ್ವಗಳ ಕೊರತೆಯನ್ನು ನಿವಾರಿಸುತ್ತದೆ.
  5. ಬಾಣಂತಿಯರಲ್ಲಿ ಮೊಲೆಹಾಲಿನ ಉತ್ಪತ್ತಿಯನ್ನು ಪ್ರಚೋದಿಸುತ್ತದೆ.
  6. ಗೋಧಿಯ ಉಪಯೋಗದಿಂದ ಸ್ಥನದ ಕ್ಯಾನ್ಸರ್ ಸಾಧ್ಯತೆಯು ಕಡಿಮೆಯಾಗುತ್ತದೆ.
  7. ಮುಟ್ಟು ನಿಂತ ಮಹಿಳೆಯರಲ್ಲಿ ಕಾಣಿಸುವ ಹೃದಯ ಹಾಗು ರಕ್ತನಾಳಗಳ ತೊಂದರೆಗಳಿಗೆ ಗೋಧಿಯು ಉತ್ತಮ ಪರಿಹಾರ ದ್ರವ್ಯವಾಗಿದೆ.
  8. ಕಬ್ಬಿಣದ ಅಂಶ ಹಾಗು ಇತರ ಖನಿಜಗಳ ಇರುವಿಕೆಯಿಂದ ರಕ್ತ ಹೀನತೆಯನ್ನು ಹೋಗಲಾಡಿಸುತ್ತದೆ.
  9. ಜೀರ್ಣ ವ್ಯವಸ್ಥೆಯ ಸ್ನೇಹಿಯಾಗಿದ್ದು ಇದರಲ್ಲಿ ನಾರಿನ ಅಂಶ ಅಧಿಕವಾಗಿ ಇರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಕರುಳಿಗೆ ಬಲವನ್ನು ನೀಡುತ್ತದೆ.
  10. ದೊಡ್ಡಕರುಳಿನ ಕ್ಯಾನ್ಸರ್  ತಡೆಕಟ್ಟಲು ಮತ್ತು ಹತೋಟಿಯಲ್ಲಿ ಇಡಲು ಸಹಕರಿಸುತ್ತದೆ.
  11. ಅಧಿಕವಾದ ಕೊಬ್ಬನ್ನು ಕರಗಿಸುವುದರ ಮೂಲಕ ಸ್ಥೂಲ ಕಾಯವನ್ನು ಹೋಗಲಾಡಿಸುತ್ತದೆ.
  12. ಗೋಧಿಯು ಪಿತ್ತಾಶಯದ ಕಲ್ಲನ್ನು(gall stone ) ಹೋಗಲಾಡಿಸಲು ಸಹಕರಿಸುತ್ತದೆ.
  13. ಗೋಧಿಯು ಬಹು ಕಾಲೀನ ವ್ಯಾಧಿಗಳಾದ ಕ್ಷಯರೋಗ ,ಸಂಧುವಾತ,ಮೂಳೆಗಳ ಸವೆತ ಇತ್ಯಾದಿಗಳನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
  14. ಇದು ಮರೆಗುಳಿ(Alzheimer’s disease) ರೋಗಿಗಳಿಗೆ ಉತ್ತಮ ಆಹಾರ ದ್ರವ್ಯವಾಗಿದೆ.
  15. ಎಳೆ ಮಕ್ಕಳಿಗೆ ಗೋಧಿಯನ್ನು ನೀಡುವುದರಿಂದ ಮೂಳೆ ಹಾಗು ಮಾಂಸ ಖಂಡಗಳು ಬಲಿಷ್ಟವಾಗಿ ಬೆಳವಣಿಗೆ ಆಗುತ್ತದೆ.
  16. ಮಕ್ಕಳಲ್ಲಿ ಕಪ ಹಾಗು ದಮ್ಮು ರೋಗದ ಬಾಧೆಯಿದ್ದರೆ ನಿಯಮಿತವಾಗಿ ಗೋಧಿಯನ್ನು ತಮ್ಮ ಆಹಾರದಲ್ಲಿ ಬಳಸಬೇಕು.
  17. ಗೋಧಿಯ ನಿಯಮಿತವಾದ ಸೇವನೆಯಿಂದ ಹಲ್ಲು ಹಾಗು ವಸಡಿನ ಆರೋಗ್ಯ ಉತ್ತಮವಾಗಿರುತ್ತದೆ.
  18. ಗೋಧಿಯು ಪುರುಷರಲ್ಲಿ ಸಂತಾನ ಉತ್ಪತ್ತಿ ಸಾಮರ್ಥ್ಯವನ್ನು ವೃದ್ಧಿಸುತ್ತದೆ

 

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Dr. Ravishankar A G
ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Be the first to comment on "ಗೋಧಿಯಲ್ಲಿದೆ ಅಧಿಕ ಶಕ್ತಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*