ದೀವಟಿಗೆ:ಡಾ.ರಾಘವ ನಂಬಿಯಾರರ ಗ್ರಂಥದ ಕಿರು ನೋಟ

  • ಕೃಷ್ಣಪ್ರಕಾಶ ಉಳಿತ್ತಾಯ

Heard melodies are sweet, but those unheard are sweeter-
ಕೀಟ್ಸ್ ಕವಿವಾಣಿ.

ಇದೇ ದೊಂದಿಬೆಳಕಿನ ಆಟದ ಸಹಜ ಸೌಂದರ್ಯದ ಗುಟ್ಟು. ಪ್ರೇಕ್ಷಕನನ್ನು ವೀಕ್ಷಣೆಗೆ ಅಣಿಯಾಗಿಸಿ ಕಲಾ-ಭ್ರಮಾಲೋಕಕ್ಕೆ ಒಯ್ಯುವ ಅದ್ವಿತೀಯ ಕಲೆಯ ಪ್ರಸ್ತುತಿ ದೀವಿಟಿಗೆಯ ಯಕ್ಷಗಾನ.

ಜಾಹೀರಾತು


“ಸುತ್ತಲಿನ ಬಾನು, ಕತ್ತಲೆಗಳು ಚಪ್ಪರವಾಗಿರುವಾಗ -ದೀವಿಟಿಗೆಗಳ ಮಂಜು ಬೆಳಕೇ ತುಂಬ ಅನುಕೂಲವೆನಿಸುತ್ತದೆ. ಅದು ನಮ್ಮ ಮನಸ್ಸು ವಾಸ್ತವ ಲೋಕದಿಂದ ‘ನಿಗೂಢ’ ಲೋಕಕ್ಕೆ ಎಳೆದೊಯ್ಯಲು ಹೆಚ್ಚು ಸಹಾಯವಾಗುತ್ತದೆ. ದೇವಾಲಯದ ಗರ್ಭಗುಡಿಯ ಪುಟ್ಟ ಹಣತೆಯ ಬೆಳಕಿಗೆ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಲು ಇನ್ನಷ್ಟು ಶಕ್ತಿಇದೆ….” ಇದು ಶಿವರಾಮ ಕಾರಂತರ ” ಬಯಲಾಟ ” ಪುಸ್ತಕದಲ್ಲಿ ಬರುವ ವಾಕ್ಯ. ದಿ.ಜಿ.ಟಿ.ನಾರಾಯಣ ರಾಯರ ಮಾತು ನೋಡಿ: ಋತದ ಪರಿಮುದ್ರೆ ಸರಳತೆ, ಸತ್ಯದ ಪರಿವೇಷ ಸೌಂದರ್ಯ . ಮನಸ್ಸು ನಿಜಾರ್ಥದ ಸೌಂದರ್ಯವನ್ನು ಅನುಭವಿಸಲು ಮತ್ತು ಅದೇ ಆಗಲು ಸರಳತೆಯ ಸಾಕ್ಷಾತ್ಕಾರ ಅಂತರಂಗದಲ್ಲಾಗಬೇಕು. ಇದೆಲ್ಲವನ್ನು ನಾನು ಹೇಳುವುದು ಡಾ.ಡಾ.ರಾಘವ ನಂಬಿಯಾರರ “ದೀವಿಟಿಗೆ” ಗ್ರಂಥವನ್ನು ಅವಲೋಕಿಸುವ ಹಿನ್ನೆಲೆಯಲ್ಲಿ. ನಂಬಿಯಾರರು ಇಲ್ಲಿ ಹೇಳಿರುವುದು ಅವರ ದೀವಿಟಿಗೆ ಯಕ್ಷಗಾನ ಅಭಿಯಾನದ ಪರಿಕಲ್ಪನೆ ಮೂಡಿದ್ದು ಹೇಗೆ ಮತ್ತು ಯಾವ ಆಕಾರ ತಾಳಿತು. ಜತೆ ಜತೆಗೇ ದೀವಿಟಿಗೆ ಯಕ್ಷಗಾನದ ಸೊಗಸು ಏನು. ಯಾವ ರೀತಿ ಮಂದ ಬೆಳಕಿನ ಸೌಂದರ್ಯದಿಂದ ಉಜ್ವಲ ಬೆಳಕಿನ ಮಂದಬೆಳಕಿಗೆ ಇಳಿಯಿತು ಎಂಬುದರ ಬಗೆಗೆ ಅವರ ಅನಿಸಿಕೆಗಳನ್ನು ಬಹಳ ಪರಿಣಾಮಕಾರಿಯಾಗಿ ಹೇಳಿದ್ದಾರೆ. ”

ದೀವಿಟಿಗೆ ಯಕ್ಷಗಾನದ ಸಿದ್ಧತೆ, ಅವರ ತಂಡ “ಯಕ್ಷ ಕೌಮುದಿ ” ನಡೆದ ಹಾದಿ ಹೀಗೆ ವಿವೇಚಿಸಿದ್ದಾರೆ. ಇಲ್ಲೊಂದು ಅವರ ಚಿಂತನೆ ನೋಡಿ ” ಒಂದು ಧಾರ್ಮಿಕ ವಿಧಿಯೆಂದು ಆಟದ ಪ್ರದರ್ಶನವನ್ನು ಕಟ್ಟುನಿಟ್ಟಿನಿಂದ ಇರಿಸಿಕೊಂಡಿದ್ದರೆ ಆಟಕ್ಕೆ ಈ ಅವನತಿ ಬರುತ್ತಿರಲಿಲ್ಲ”.

ಒಟ್ಟು ಎಂಭತ್ತೆಂಟು ಪುಟಗಳ ಈ ಕಿರು ಹೊತ್ತಗೆಯ ಯಕ್ಷಗಾನ ಕ್ಷೇತ್ರದ ಶುದ್ಧ ರೂಪವನ್ನು ಬಯಸುವವರಿಗೆ, ಎಲ್ಲಾ ಕಲಾವಿದರಿಗೆ ಮತ್ತು ಕಲಾಸಕ್ತರಿಗೆ ಗಮನಿಸಬೇಕಾದಂತಹಾದ್ದು.

ಜಾಹೀರಾತು

ಅತ್ರಿ ಬುಕ್ ಸೆಂಟರ್, ಮಂಗಳೂರು ಇವರು ಹೊರತಂದಿರುವ ಈ ಪುಸ್ತಕದ ಬೆಲೆ ಕೇವಲ ಅರವತ್ತು ರೂಪಾಯಿ. ಶ್ರೀ ಜಿ.ಎನ್ ಅಶೋಕವರ್ಧನ ಅವರಲ್ಲಿ ಇದರ ಸಂಗ್ರಹ ಇರಬಹುದು. ಖಂಡಿತಾ ಓದಿ.

  • ಕೃಷ್ಣಪ್ರಕಾಶ ಉಳಿತ್ತಾಯ
    ಈಶಾವಾಸ್ಯ
    ಸದಾಶಿವ ದೇವಸ್ಥಾನದ ಬಳಿ
    ಪೆರ್ಮಂಕಿ, ಉಳಾಯಿಬೆಟ್ಟು
    ಮಂಗಳೂರು
    ೫೭೪೧೪೫

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ದೀವಟಿಗೆ:ಡಾ.ರಾಘವ ನಂಬಿಯಾರರ ಗ್ರಂಥದ ಕಿರು ನೋಟ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*