ಸಜೀಪ ಬಿಸು ಜಾತ್ರೆ 16ರವರೆಗೆ

ಸಜೀಪಮಾಗಣೆ ಶ್ರೀ ಕ್ಷೇತ್ರ ಮಿತ್ತಮಜಲಿನಲ್ಲಿ ಸಜೀಪ ಬಿಸು ಜಾತ್ರೆ ಆರಂಭಗೊಂಡಿದ್ದು, 16ವರೆಗೆ ನಡೆಯಲಿದೆ.
11ರಂದು ಅಪರಾಹ್ನ 8 ಗಂಟೆಗೆ ಕಾಂತಾಡಿಗುತ್ತಿನಿಂದ ದೈವಂಗಳ ಕಿರುವಾಲು ಬಂದು, ಸಾನದಿಂದ ನಾಲ್ಕೈತ್ತಾಯ ದೈವದ ಭಂಡಾರ ಬಂದ ಬಳಿಕ ರಾತ್ರಿ 10 ಗಂಟೆಗೆ ಕಿರುವಾಲು ಭಂಡಾರ ಮನೆಯಿಂದ ಹೊರಟು, ಅಗರಿಯಲ್ಲಿ ದೈವಂಗಳು ಅಣ್ಣ ತಮ್ಮ ನೇಮ ನೆರವೇರಿದೆ. ಬೆಳಗ್ಗೆ ಬೂಳ್ಯ ಪ್ರಸಾದವಾಗಿ ಕಿರುವಾಲು ಭಂಡಾರದ ಮನೆಗೆ ಬರುವ ಕಾರ್ಯ ನಡೆಯಿತು.
12ರಂದು ರಾತ್ರಿ 8 ಗಂಟೆಗೆ ಭಂಡಾರದ ಮನೆಯಿಂದ ನಗ್ರಿ ಮಾಡಕ್ಕೆ ಹಓಗಿ, ಅಣ್ಣತಮ್ಮಂದಿರು ದೈವಂಗಳ ನೇಮವಾಗಿ ಏ.13ರಂದು ಬಎಳಗ್ಗೆ 7 ಗಂಟೆಗೆ ನಗ್ರಿ ಮಾಡದಿಂದ ಮಿತ್ತಮಜಲು ಕ್ಷೇತ್ರಕ್ಕೆ ಬಂದು ಧ್ವಜಾರೋಹಣ ನೆರವೇರಿತು.
ಏ.11, 12 ಮತ್ತು 13ರಂದು ಮೂರು ದಿನ ಚೆಂಡು ಕಾರ್ಯಕ್ರಮ ನಡೆದಿದ್ದು ಗುರುವಾರ ದೈವದ ವಲಸರಿಯಾಗಿ ರಾತ್ರಿ 9 ಗಂಟೆ ಸುಮಾರಿಗೆ ಉಳ್ಳಾಲ್ತಿ ಅಮ್ಮನವರಿಗೆ ಭಕ್ತರು ಒಪ್ಪಿಸಿದ ಪಟ್ಟೆ ಸೀರೆಗಳ ಏಲಂ ನಡೆಯಿತು. ಗುರುವಾರ ರಾತ್ರಿ 9 ಗಂಟೆಗೆ ದೈವಂಗಳ ವಲಸರಿ, ರಾತ್ರಿ 2 ಗಂಟೆಗೆ ನಾಲ್ಕತ್ತಾಯ ಮೆಚ್ಚಿ ಜಾತ್ರೆ ನಡೆಯಿತು.
14ರಂದು ಶುಕ್ರವಾರ ರಾತ್ರಿ 2 ಗಂಟೆಗೆ ಕಾಂತಾಡಿಗುತ್ತು ಮನೆತನದ ಕೆರೆನೇಮ ಅಣ್ಣ ದೈವಂಗಳಿಗೆ ನಡೆಯಲಿದೆ. 15ರ ಶನಿವಾರ ಬೆಳಗ್ಗೆ 7.30ಕ್ಕೆ ತಮ್ಮ ದೈವಂಗಳು ಕೆರೆನೇಮ, ಬೆಳಗ್ಗೆ 10 ಗಂಟೆ ನಂತರ ಉಡುಕುಬಲಿ ಸೇವೆ, ಬೂಳ್ಯ ವಿತರಣೆ, ಮಧ್ಯಾಹ್ನ ಅನ್ನ ಸಂತರ್ಪಣೆ., 16ರ ರವಿವಾರ ಪರಿವಾರ ದೈವಗಳ ನೇಮ, ಬೆಳಗ್ಗೆ ಜುಮಾದಿಬಂಟ, ಮಲರಾಯ, ಪಿಲಿಚಾಮುಂಡಿ ದೈವಗಳಿಗೆ ನೇಮ, ನಂತರ ಮಧ್ಯಾಹ್ನ 2 ಗಂಟೆಗೆ ಕಿರುವಾಲು ಇಳಿಯುವುದು ಎಂದು ಪ್ರಕಟಣೆ ತಿಳಿಸಿದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಸಜೀಪ ಬಿಸು ಜಾತ್ರೆ 16ರವರೆಗೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*